ಆಲ್ದಾಳ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ರಾಜುಗೌಡ ಸಮ್ಮುಖದಲ್ಲಿ ಬಿಜೆಪಿಗೆ

0
32

ಸುರಪುರ: ರಾಜ್ಯದ ಸಮಗ್ರ ಅಭಿವೃಧ್ಧಿ ಎಂಬುದು ಕೇವಲ ಬಿಜೆಪಿ ಪಕ್ಷದಿಂದ ಸಾಧ್ಯವಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗಾಗಿ ಇಡೀ ತಮ್ಮ ಬದುಕನ್ನು ಸವೀಸಿದ ಒಬ್ಬ ಧೀಮಂತ ನಾಯಕರಾಗಿದ್ದಾರೆ.ಅಲ್ಲದೆ ಯಡಿಯೂರಪ್ಪನವರು ಈ ರಾಜ್ಯ ಕಂಡ ಮೇಧಾವಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ತಾಲೂಕಿನ ಆಲ್ದಾಳ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಂಡು ಮಾತನಾಡಿದ ಅವರು,ನಮ್ಮ ಸರಕಾರ ರಾಜ್ಯದ ಅಭಿವೃಧ್ಧಿಗಾಗಿ ಅನೇಕ ಯೋಜನೆಗಳನ್ನು ನೀಡಿದೆ,ಅಲ್ಲದೆ ನಾನು ಕೂಡ ತಾಲೂಕಿನ ಅಭೀವೃಧ್ಧಿಗಾಗಿ ಗ್ರಾಮಗಳಲ್ಲಿ ಸಿಸಿ ರಸ್ತೆ ಶಾಲೆ ಸಮುದಾಯ ಭವನ ಕುಡಿಯುವ ನೀರು ಮತ್ತು ನೀರಾವರಿಗಾಗಿ ಅಪಾರ ಪ್ರಮಾಣದ ಅನುದಾನವನ್ನು ತಂದು ರೈತರ ನೆರವಿಗೆ ಸದಾಕಾಲ ಇರುವುದಾಗಿ ತಿಳಿಸಿದರು.

Contact Your\'s Advertisement; 9902492681

ನಂತರ ಮುಖಂಡರಾದ ರಾಜಗೋಪಾಲ ನಾಯಕ ಜಹಾಗಿರದಾರ ಲಕ್ಷ್ಮಣ ಕಟ್ಟಿಮನಿ ಮಂಜುನಾಥ ಕಟ್ಟಿಮನಿ ರಾಮಣ್ಣ ಕಟ್ಟಿಮನಿ ದುರಗಪ್ಪ ಕಟ್ಟಿಮನಿ ದುರಗಪ್ಪ ಹುಣಸಗಿ ಮುದಕಪ್ಪ ಚಿನ್ನಾಕಾರ ಹೈಯಾಳಪ್ಪ ಕಟ್ಟಿಮನಿ ಕಾಶಿನಾತ ದಿವಾಕರ ರಾಘವೇಂದ್ರ ಕಟ್ಟಿಮನಿ ಸೇರಿದಂತೆ ಅನೇಕರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಜಿಲ್ಲಾ ಪಂಚಾಯತಿ ಸದಸ್ಯ ಬಸವರಾಜ ಸ್ಥಾವರಮಠ ಮಾಜಿ ಜಿ.ಪಂ ಅಧ್ಯಕ್ಷ ಯಲ್ಲಪ್ಪ ಕುರಕುಂದಿ ಹೆಚ್.ಸಿ.ಪಾಟೀಲ ಎಪಿಎಂಸಿ ಅಧ್ಯಕ್ಷ ದೇವಣ್ಣ ಮಲಗಲದಿನ್ನಿ ಸುರಪುರ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ ಶಾಂತಗೌಡ ಚೆನ್ನಪಟ್ಟಣ ಸಿದ್ದನಗೌಡ ಕರಿಬಾವಿ ಸಾಬಣ್ಣ ಪೂಜಾರಿ ಬಾಲಗೌಡ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here