ಮಣ್ಣಿನ ಸವೆತದಿಂದ ಜಗತ್ತು ಗಂಭೀರ ಬಿಕ್ಕಟ್ಟು ಎದುರಿಸಲಿದೆ: ಬೆಳ್ಳಕ್ಕಿ

0
49

ಕಲಬುರಗಿ; ವಿಶ್ವದಲ್ಲಿನ ಶೀಘ್ರ ಮಣ್ಣಿನ ಸವೆತವು ಮಾನವ ಮತ್ತು ಪ್ರಾಣಿಗಳ ಜೀವನದ ಮೇಲೆ ಕೆಟ್ಡ ಪರಿಣಾಮವನ್ನು ಬೀರುತ್ತಿದೆ. ಆಹಾರ ಧಾನ್ಯ ಉತ್ಪಾದನೆಯಲ್ಲಿ ಜಗತ್ತು ಮುಂದೆ ಗಂಭೀರ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ಕಲಬುರಗಿಯ ಕೃಷಿ ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕ ಹಾಗೂ ಕೃಷಿ ವಿಜ್ಞಾನಿ ಡಾ.ಎಂ.ಎ.ಬೆಳ್ಳಕ್ಕಿ ಎಚ್ಚರಿಕೆ ನೀಡಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ವತಿಯಿಂದ ಸಮಾವೇಶ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಭೂ ಸವೆತದಿಂದ ಪ್ರತಿಶತ ೩೦ರ? ಮಣ್ಣು ಭೂಮಿಯ ಫಲವತ್ತತೆ ಕಳೆದುಕೊಂಡಿದೆ. ೨೦೫೦ ರ ವೇಳೆಗೆ ಸುಮಾರು ೯೦ ರ? ಮಣ್ಣಿನ ಮೇಲಿನ ಫಲವತ್ತತೆ ಸವೆದು ಹೋಗುತ್ತದೆ ಎಂದರು.

Contact Your\'s Advertisement; 9902492681

ಒಂದು ಇಂಚು ಮಣ್ಣಿನ ಮೇಲಿನ ಉತ್ಪಾದನೆಗೆ ೧೦೦೦ ವ?ಗಳನ್ನು ತೆಗೆದುಕೊಳ್ಳುತ್ತದೆ. ಸೂಕ್ತವಲ್ಲದ ಬೆಳೆಗಳನ್ನು ಬೆಳೆಯುವ ಮೂಲಕ ಭೂಮಿಯನ್ನು ವಿವೇಚನೆಯಿಲ್ಲದೆ ಬಳಸುವುದರಿಂದ, ಕೃಷಿ ಮಾದರಿಯನ್ನು ಬದಲಾಯಿಸುವ ಪದ್ಧತಿಗೆ ಅಂಟಿಕೊಳ್ಳದಿರುವುದು, ಸುಸ್ಥಿರ ಕೃಷಿಯನ್ನು ಅನುಸರಿಸದಿರುವುದರಿಂದ ಭೂಮಿಯು ಫಲವತ್ತತೆ ಕಳೆದುಕೊಳ್ಳುತ್ತಿದೆ. ಕೃಷಿಯಲ್ಲಿ ಬದಲಾವಣೆ , ಕೈಗಾರಿಕರಣ ಮತ್ತು ನಗರೀಕರಣಕ್ಕೆ ಫಲವತ್ತಾದ ಕೃಷಿ ಭೂಮಿಯನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಕೃಷಿ ಯೋಗ್ಯ ಭೂಮಿ ಕಳೆದುಕೊಳ್ಳುತ್ತಿದ್ದೆವೆ ಎಂದು ಕಳವಳ ವ್ಯಕ್ತಪಡಿಸಿದರು.

ಡಾ. ಬೆಳ್ಳಕ್ಕಿ ಮಾತನಾಡುತ್ತಾ, ಮಣ್ಣಿನ ಜೀವಂತ ಜೀವಿಗಳನ್ನು ರಕ್ಷಿಸುವ ಅಗತ್ಯತ್ತೆಯನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಮಣ್ಣಿನ ಫಲವತ್ತತೆಯನ್ನು ಸಮೃದ್ಧಗೊಳಿಸಲು ಸಹಾಯ ಮಾಡುವ ನೈಸರ್ಗಿಕ ಮತ್ತು ಸಾವಯವ ವಸ್ತುಗಳ ಬಳಕೆಯಿಂದ ಮಣ್ಣನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಮಣ್ಣಿನ ಸವೆತದಿಂದಾಗಿ ಭೂಮಿ ಕೃಷಿಗೆ ಅನರ್ಹವಾಗುತ್ತದೆ ಮತ್ತು ಮತ್ತೊಮ್ಮೆ ಮಣ್ಣನ್ನು ಉತ್ಕೃ?ಗೊಳಿಸುವುದು ತುಂಬಾ ಕ?ಕರವಾಗಿರುತ್ತದೆ ಎಂದರು.

ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳಲು ಮಣ್ಣಿನ ವೈಜ್ಞಾನಿಕ ನಿರ್ವಹಣೆ ಮುಖ್ಯವಾಗಿದೆ. ಮಾನವ ಮತ್ತು ಪ್ರಾಣಿಗಳ ಆಹಾರದ ಶೇಕಡಾ ೯೫ ರ? ಆಹಾರವನ್ನು ಪೂರೈಸುವುದರ ಜೊತೆಗೆ, ಮಣ್ಣಿನಲ್ಲಿರುವ ಜೀವಿಯು ಉತ್ಪಾದನೆಗೆ ಪ್ರಮುಖ ಮೂಲವಾಗಿದೆ. ಪ್ರತಿಜೀವಕಣಗಳು ಅನೇಕ ರೋಗಗಳಿಂದ ರಕ್ಷಿಸುತ್ತವೆ ಎಂದರು.

ಸಾವಯವ ಕೃಷಿಯಲ್ಲಿ ಪರಿಣತರಾಗಿರುವ ಡೈರಿ ಸೈನ್ಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಮಲ್ಲಿನಾಥ್ ಆರ್ ಹೆಮ್ಮಾಡಿ ಮಾತನಾಡಿ, ಮಣ್ಣು ವಿಶ್ವದ ಅತ್ಯಂತ ನಿರ್ಲಕ್ಷಿತ ವಿ?ಯವಾಗಿದೆ. ಇದನ್ನು ರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಈ ಜಗತ್ತಿನಲ್ಲಿ ಜೀವಕ್ಕೆ ಜನ್ಮ ನೀಡಿದ ಮಣ್ಣಿನ ಫಲವತ್ತತೆ. ರಸಗೊಬ್ಬರಗಳು, ಸಸ್ಯನಾಶಕಗಳು ಮತ್ತು ಕೀಟನಾಶಕಗಳ ವಿವೇಚನೆಯಿಲ್ಲದ ಬಳಕೆಯಿಂದ ಮಣ್ಣಿನ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತಿದೆ. ಕೃಷಿಯಲ್ಲಿ ಗೊಬ್ಬರದ ಅತಿಯಾದ ಬಳಕೆಯ ನಂತರ ಕಳೆದ ೫ ದಶಕಗಳಲ್ಲಿ ಮಣ್ಣಿನ ಫಲವತ್ತತೆ ತೀವ್ರವಾಗಿ ಕಡಿಮೆಯಾಗಿದೆ ಎಂದು ತಿಳಿಸಿದರು.

ಮಣ್ಣಿನ ಫಲವತ್ತತೆಯ ನ?ವು ಆಹಾರ ಧಾನ್ಯಗಳ ಉತ್ಪಾದನೆಯನ್ನು ಕಡಿಮೆಗೊಳಿಸಿದ್ದು ಹಾಗೂ ಗುಣಮಟ್ಟವನ್ನು ತೀವ್ರವಾಗಿ ಕಡಿಮೆಗೊಳಿಸಿದೆ, ಮಣ್ಣಿನ ಸವೆತವು ಮಾನವ ಜೀವನದ ಮೇಲೆ ಇತರೆ ದುಷಃಪರಿಣಾಮಗಳಿಗೆ ಕಾರಣವಾಗಿದೆ. ಮಣ್ಣಿನಲ್ಲಿನ ನೀರಿನ ಧಾರಣ ಶೇಕಡಾವಾರು ಪ್ರಮಾಣವನ್ನು ಹೊಂದಿದೆ. ದೇಶದ ವಿವಿಧ ಭಾಗಗಳಲ್ಲಿ ನಿಯಮಿತವಾಗಿ ಭಾರಿ ಮಳೆ ಮತ್ತು ಪ್ರವಾಹಗಳು ಬಂದಿದ್ದರೂ ಭೂಗತ ನೀರಿನ ಏರಿಕೆಯಾಗಿಲ್ಲ ಮತ್ತು ಕುಡಿಯುವ ನೀರಿನ ಕೊರತೆಯು ನಿರಂತರ ಸಮಸ್ಯೆಯಾಗಿ ಮುಂದುವರೆದಿದೆ ಎಂದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ ಮತ್ತು ವ್ಯವಹಾರ ಅಧ್ಯಯನ ವಿಭಾಗದ ಡೀನ್ ಡಾ.ಎಸ್. ಎಚ್ ಹೊನ್ನಳ್ಳಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here