ಭಾರತ ಬಂದ್: ಕಾಂಗ್ರೆಸ್ ಬೆಂಬಲ: ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ

0
85

ಕಲಬುರಗಿ: ಕೇಂದ್ರ ಬಿಜೆಪಿ ಸರಕಾರ ತಂದಿರುವ ರೈತ ವಿರೋಧಿ, ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ದೇಶದ ಜನತೆಗೆ ಮಾರಕವಾಗುವಂತೆ ಕಾನೂನು ತಿದ್ದುಪಡಿಗಳನ್ನು ಜಾರಿಗೆ ತರುತ್ತಿರುವದನ್ನು ಖಂಡಿಸಿ ರಾಷ್ಟ್ರದ್ಯಾದ್ಯಂತ ರೈತರು ಹಾಗೂ ರೈತ ಸಂಘಟನೆಗಳು ನಾಳೆ ಭಾರತ ಬಂದ್ ನಡೆಸುತ್ತಿರುವದಕ್ಕೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೆಂಬಲ ಸೂಚಿಸಿದೆ.

ಬಂದ್ ಕರೆಗೆ ಎಲ್ಲಾ ತಾಲ್ಲೂಕು ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಖಂಡರು, ಕಾರ್ಯಕರ್ತರು ಬೆಂಬಲವನ್ನು ಸೂಚಿಸಲು ಮತ್ತು ಭಾರತ ಬಂದ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೂಚಿಸಿದೆ.

Contact Your\'s Advertisement; 9902492681

ನಾಳೆ ಬೆಳಿಗ್ಗೆ 8-30 ನಿಮಿಷಕ್ಕೆ ನಗರದ ಕೇಂದ್ರ ಬಸ್ ನಿಲ್ದಾಣ ಎದುರುಗಡೆ ಆಗಮಿಸಿ ಭಾರತ ಬಂದ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here