ಗುಳಬಾಳ ಗ್ರಾಮದ ಬಿಜೆಪಿಗರು ಮಾಜಿ ಶಾಸಕರ ಸಮ್ಮುಖ ಕಾಂಗ್ರೆಸ್ ಸೇರ್ಪಡೆ

0
36

ಸುರಪುರ: ನಗರದ ಕಾಂಗ್ರೆಸ್ ಕಛೇರಿಯಲ್ಲಿ ಗುಳಬಾಳ ಗ್ರಾಮದ ಹಲವಾರು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರು, ನಿಮ್ಮ ಎಲ್ಲಾ ಕಷ್ಟಗಳಿಗೆ ಹಗಲಿರಳು ನಿಮ್ಮ ಜೊತೆ ಇದ್ದು ಪರಿಹರಿಸುವ ಪ್ರಯತ್ನ ಮಾಡುವೆ ಹಾಗೂ ಪ್ರಸ್ತುತ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಹೇಳಿದರು ಮತ್ತು ತಾಲ್ಲೂಕಿನ ಹಿರಿಯ ಕಿರಿಯ ಮುಖಂಡರುಗಳು ಪಕ್ಷದ ಕಾರ್ಯಕರ್ತರು ಒಗ್ಗೂಡಿ ಅವಿರತವಾಗಿ ಶ್ರಮಿಸಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ನಂತರ ನಿಂಗಣ್ಣ (ಲೀಡರ್) ಕೋಳಿಹಾಳ ಇವರ ನೇತೃತ್ವದಲ್ಲಿ ಮಲ್ಲನಗೌಡ ಸಾಸನೂರ, ಸಾಹೇಬಗೌಡ ಕೋಳಿಹಾಳ, ಗೋಪಾಲ ಗೌಡಗೇರಿ, ಬಸನಗೌಡ ಮಾರಲಬಾವಿ, ಪ್ರಕಾಶ ಮಾರಲಬಾವಿ, ಪರಮಣ್ಣ ಹುಣಸಗಿ, ರಾಜು ಧನ್ನೂರ, ಶರಣಬಸವ ದೊಡ್ಡಮನಿ, ರಂಗಪ್ಪ ಕಲ್ಯಾಣಿ, ನಾಗೇಶ ದೊಡ್ಡಮನಿ, ರಾಮಲಿಂಗಪ್ಪ ಬುದಿಹಾಳ, ಮಲ್ಲಣ್ಣ ದೊಡ್ಡಮನಿ, ತಿರುಪತಿ ಸುರಪುರ, ರಾಮಲಿಂಗ ಕಕ್ಕೇರಿ, ನಿಂಗಣ್ಣ ಬನ್ನೇಟ್ಟಿ, ರಮೇಶ ದೊಡ್ಡಮನಿ, ತಿಮ್ಮಣ್ಣ ಹುಣಸಗಿ, ವಿರೇಶ ಮಾದರ ಹಾಗೂ ಇನ್ನಿತರರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಅನೇಕ ಜನ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here