ಸುರಪುರ: ತಾಲೂಕಿನ ಸೊನ್ನಾಪುರ ತಾಂಡಾದ ಬಿಜೆಪಿ ಪಕ್ಷದ ಮಖಂಡರು ಕಾಂಗ್ರೆಸ್ ಮುಖಂಡರಾದ ರಾಜಾ ವೇಣುಗೊಪಾಲ ನಾಯಕ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ರಾಜಾ ವೇಣುಗೊಪಾಲ ನಾಯಕ ಮಾತನಾಡಿ, ನಿಮ್ಮ ಕಷ್ಟಗಳಿಗೆ ನಾವು ನಿಮ್ಮ ಜೊತೆ ಇರುತ್ತೇವೆ ಹಾಗೂ ಕ್ಷೇತ್ರದಲ್ಲಿ ಮತ್ತೋಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು ಇದಕ್ಕೆ ತಾಲ್ಲೂಕಿನ ಹಿರಿಯ ಕಿರಿಯ ಮುಖಂಡರುಗಳು ಪಕ್ಷದ ಕಾರ್ಯಕರ್ತರು ಒಗ್ಗೂಡಿ ದುಡಿಯಬೇಕು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೇಲುವಿಗಾಗಿ ಅವಿರತವಾಗಿ ಶ್ರಮಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಗೋಪಾಲ, ನಿಂಗಪ್ಪ ಪವಾರ, ಅಮರೇಶ, ಚಂದಪ್ಪ, ಉಮಲೇಪ್ಪ, ಸಕ್ರಪ್ಪ, ರಾಮಣ್ಣ, ಈರಪ್ಪ ಪೂಜಾರಿ, ಲೋಕಪ್ಪ, ತಿಮ್ಮಣ್ಣ ಚವ್ಹಾಣ, ತಿರುಪತಿ ಚವ್ಹಾಣ, ಥಾವರೆಪ್ಪ, ನಾರಾಯಣ ರಾಠೋಡ, ಸೋಮಲಪ್ಪ, ರಮೇಶ, ನಿಂಗಪ್ಪ, ಸೂರಪ್ಪ, ಪೀರಪ್ಪ ಸುಬ್ಬಣ್ಣ ಪವಾರ, ನಂದಪ್ಪ, ಮಲ್ಲಪ್ಪ, ನೀಲಪ್ಪ, ಚಂದಪ್ಪ ಪವಾರ, ತುಕರಾಮ ಪವಾರ, ಮೋತಿಲಾಲ, ತಿಪ್ಪಣ್ಣ ಜಾಧವ, ತಿರುಪತಿ ಪವಾರ, ನಂದಪ್ಪ ಚವ್ಹಾಣ, ಶಂಕ್ರಪ್ಪ ಚವ್ಹಾಣ, ಸೋಮಲಪ್ಪ ಪವಾರ, ಧರ್ಮಣ್ಣ ಚವ್ಹಾಣ, ಶೇವಾಪ್ಪ ಕಿಲಾರಿ, ಜೈರಾಮ ಕಿಲಾರಿ, ಶಾಂತಪ್ಪ, ಹಾಗೂ ಇನ್ನಿತರರು ಕಾಂಗ್ರೆಸ್ ಸೇಪ್ಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಮುದಿಗೌಡ ಹಣಮರೆಡ್ಡಿ ಕುಪ್ಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ರಾಜಾ ಸಂತೋಷ ನಾಯಕ, ಭೀಮುನಾಯಕ ತಾ.ಪಂ. ಸದಸ್ಯರು, ಬಸನಗೌಡ ಮಾಲಿ ಪಾಟೀಲ್ ಕಡದರಾಳ, ಗುಂಡಪ್ಪ ಗೇದ್ದಲಮರಿ ತಾಂಡಾ, ಗೋವಿಂದ ನಾಯ್ಕ ಸೊನ್ನಾಪೂರ ತಾಂಡಾ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಂಖಂಡರು ಮತ್ತು ಯುವ ಕಾಂಗ್ರೆಸ್ ಮುಖಂಡರು ಇನ್ನಿತರರು ಉಪಸ್ಥಿತರಿದ್ದವರು.