ಕಲಬುರಗಿ: ಅಬಕಾರಿ ದಾಳಿ: ವಾಹನ ಜಪ್ತಿ ಸೇರಿ ಮದ್ಯ ಜಪ್ತಿ

0
123

ಕಲಬುರಗಿ: ಅಬಕಾರಿ ಜಂಟಿ ಆಯುಕ್ತರು ವಿಭಾಗ ರವರ ನಿರ್ದೇಶನ ಹಾಗು ಅಬಕಾರಿ ಉಪ ಆಯುಕ್ತರು ಕಲಬುರಗಿ ರವರ ಆದೇಶದ ಮೇರೆಗೆ ,ಅಬಕಾರಿ ಉಪ ಅಧೀಕ್ಷಕರು ಚಿತ್ತಾಪುರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ , ಚಿತ್ತಾಪೂರ ತಾಲ್ಲೂಕಿನ ಶಹಾಬಾದ ನಗರದ ಎ.ಬಿ.ಎಲ್ ಕ್ರಾಸ್ ಹಾಗೂ ವಾಡಿ ಪಟ್ಟಣದ ಬಲರಾಮ ಚೌಕ ಹತ್ತಿರ ಎರಡು ಕಡೆ ಪ್ರತೇಕ ಅಬಕಾರಿ ದಾಳಿ ನಡೆಸಿದ್ದಾರೆ.

ಮಾಡಿ ಎರಡು ದ್ವಿ ಚಕ್ರ ವಾಹನಗಳ ಮೇಲೆ ಒಟ್ಟು 3 ಬಾಕ್ಸ ಮದ್ಯ ಮತ್ತು 2 ಬಾಕ್ಸ ಬಿಯರ (ಒಟ್ಟು 25.920 ಲೀಟರ್‌‌ ಸ್ವದೇಶಿ ಮದ್ಯವನ್ನು ಹಾಗೂ 15.600 ಲೀಟರ್ ಬಿಯರ್ ) ಸಾಗಾಣಿಕೆ ಮಾಡುತ್ತಿದ್ದಾಗ ಅಬಕಾರಿ ದಾಳಿ ಮಾಡಿ ಮಧ್ಯ ಮಾಲು ಹಾಗೂ ವಾಹನಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.

Contact Your\'s Advertisement; 9902492681

ಈಗಾಗಲೇ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಹಾಗೂ ಪರಾರಿಯಾದ ವಾಹನ ಸವಾರರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಅಬಕಾರಿ ವಲಯ ನಿರೀಕ್ಷಕರಾದ ರಮೇಶ ಬಿರಾದಾರ ತಿಳಿಸಿದರು.

ಈ ಸಂದರ್ಭದಲ್ಲಿ ಧನರಾಜ ಸಿಬ್ಬಂದಿಗಳಾದ ಶಿವಾನಂದ, ಶರಣಬಸಪ್ಪ, ಮಹಾಂತೇಶ, ನಾಗರಾಜ, ಸುಭಾಷ , ಭಾಷಾಸಾಬ ಹಾಗು ಮಲ್ಲು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here