ಕಲಬುರಗಿ: ಚಲಿಸುತ್ತಿದ್ದ ಬಸ್ಸಿಗೆ ಕಲ್ಲು ತೂರಿದ ಕಿಡಿಗೇಡಿಗಳು.!

0
40

ಕಲಬುರಗಿ: ಸಾರಿಗೆ ನೌಕರರ ಮುಷ್ಕರ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಸಹ ಬಸ್‌ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವುದರಿಂದ ಕೆಲಹೊತ್ತಷ್ಟೇ ಬಸ್‌ ಸಂಚಾರ ಸ್ಥಗಿತವಾಗಿತ್ತು. ನೌಕರರ ಕೆಲಸಕ್ಕೆ ತರಳದಿದ್ದಾಗ ಅಧಿಕಾರಿಗಳು ಬರುತ್ತಿದ್ದಂತೆ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿರುವ ಘಟನೆ ನಗರ ಕೇಂದ್ರ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಅಧಿಕಾರಿಗಳ ಒತ್ತಡದಿಂದ ನೌಕರರು ಕರ್ತವ್ಯದಲ್ಲಿ ಮತ್ತೇ ತೊಡಗಿದ್ದು, ಪ್ರಸ್ತುತ ಎಂದಿನಂತೆ ಬಸ್‌ ಸಂಚಾರ ಆರಂಭವಾಗಿತ್ತು. ನಂತರ ಅಪರಹ್ನ ವೇಳೆಯಲ್ಲಿ ಗಾಣಗಾಪುರದಿಂದ ಕಲಬುರಗಿಗೆ ಬರುತ್ತಿದ್ದ ಸಾರಿಗೆ ಬಸ್ ಒಂದಕ್ಕೆ ಘಟನೆ ನಗರದ ಹೊರವಲಯ ಹೈಕೋರ್ಟ್‌ ಬಳಿ  ಕಿಡಿಗೇಡಿಗಳು ಕಲ್ಲು ತೂರಿ ಗಾಜು ಒಡೆದಿರುವ ಘಟನೆ ನಡೆದಿದೆ.

Contact Your\'s Advertisement; 9902492681

ಬೈಕ್‌ನಲ್ಲಿ ತೆರಳುತ್ತಿದ್ದ ಈ ಇಬ್ಬರು ಕಿಡಿಗೇಡಿ ಕಲ್ಲೆಸೆದು, ಬಸ್ಸಿನ  ಗಾಜು ಪುಡಿ-ಪುಡಿ ಮಾಡಿದ್ದಾರೆ. ಬಸ್ಸಿನ ಚಾಲಕ ಓಂಕಾರ್‌ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here