ಐತಿಹಾಸಿ ಕೊಂಚುರು ಹನುಮಾನ ಜಾತ್ರೆ ರದ್ದು

0
24

ವಾಡಿ: ಕೋವಿಡ್ ಹಾಗೂ ಗ್ರಾಮ ಪಂಚಾಯಯಿ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಪಟ್ಟಣದ ಹತ್ತಿರದ ಐತಿಹಾಸಿ ಕೊಂಚುರು ಹನುಮಾನ ಜಾತ್ರಾ ಮಹೋತ್ಸವ ರದ್ದು ಮಡಿರುವುದಾಗಿ ಚಿತ್ತಾಪುರ ತಹಶೀಲ್ದಾರರ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.

ಜಾತ್ರೆ ನಿಮಿತ್ತ ದೇವಸ್ಥಾನ ಸಭಾಂಗಣದಲ್ಲಿ ಆಯೋಜಿಸಿದ  ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ಕಾರಣದಿಂದಾಗಿ ಜಿಲ್ಲಾಡಳಿತ ಜಾತ್ರೆ, ಸಭೆ ಸಮಾರಂಭಗಳನ್ನು ನಡೆಯದಂತೆ ಸೂಚಿಸಿರುವ ಹಿನ್ನೆಲ್ಲೆ, ಈ ವರ್ಷ ಹಲವು ಜಾತ್ರೆಗಳು ರದ್ದು ಪಡಿಸಲಾಗಿದ್ದು, ಈ ನಿಟ್ಟಿನಲ್ಲಿ ಕೊಂಚೂರು ಗ್ರಾಮದಲ್ಲಿ ನಡೆಯುವ ಹನುಮಾನ ಜಾತ್ರೆ ಸಹ ರದ್ದು ಪಡಿಸಲಾಗಿದೆ ಎಂದು ತಿಳಿಸಿದ ಅವರು ಜಾತ್ರೆಯ ಸಂಪ್ರದಾಯದಂತೆ ದೇವಸ್ಥಾನದ ಸಮಿತಿ ವತಿಯಿಂದ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸುವಂತೆ ಕೊಂಚೂರು, ಬಳವಡಿಗಿ, ಚಾಮನೂರ ಹಾಗೂ ನರಿಬೋಳ ಗ್ರಾಮಸ್ಥರಿಗೆ ಸೂಚಿಸಿದ್ದಾರೆ.

Contact Your\'s Advertisement; 9902492681

ಜಾತ್ರೆ ಸರಳ ಆಚರಣೆ ತೀರ್ಮಾನಿಸಿರುವುದರಿಂದ ಡಿ.14ರಂದಿ ಕಾರ್ತಿಕ ಹುಣ್ಣಿಮೆಯಂದು ನಡೆಯುವ ಪಲ್ಲಕ್ಕಿ ಉತ್ಸವಕ್ಕೆ ಕೇವಲ 15 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ನಿಗದಿತ ಸಮಯದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಲು ಗ್ರಾಮಸ್ಥರು ಸಹಕಾರಿಸುವಂತೆ ಕೋರಿದ್ದಾರೆ.

ಡಿ.29 ಹಾಗೂ 30ರಂದು ನಡೆಯುವ ಉಚ್ಚಾಯಿ ಹಾಗೂ ರಥೋತ್ಸವ ಸಂಪೂರ್ಣ ರದ್ದು ಮಾಡಲಾಗಿದೆ. ದೇವಸ್ಥಾನ ಕಮಿಟಿ ಸದಸ್ಯರಿಂದ ಸಂಪ್ರದಾಯದಂತೆ, ಸಂಕೇತವಾಗಿ ರಥಕ್ಕೆ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸವಂತೆ ಅವರು ಹೇಳಿದರು.

ಬಳವಡಗಿ ಯಲ್ಲಮ್ಮ ದೇವಸ್ಥಾನ ದರ್ಶನಕ್ಕೆ ಅವಕಾಶವಿಲ್ಲ. ಪ್ರತಿ ವರ್ಷ ಕೊಂಚೂರ ಜಾತ್ರೆ ದಿನದಂದೆ ಕೊಂಚೂರು ಗ್ರಾಮದ ಕೊಗಳತೆ ದೂರದಲ್ಲಿರುವ ಬಳವಡಿ ಗ್ರಾಮದಲ್ಲಿ ಯಲ್ಲಮ್ಮ ಜಾತ್ರೆ ಸಹ ರದ್ದು ಮಾಡಲಾಗಿದ್ದು, ಡಿ. 28,29  ಹಾಗೂ 30 ಮೂರು ದಿನಗಳ ಕಾಲ ಸಾರ್ವಜನಿಕರ ದರ್ಶನ ನಿರ್ಭಂದಿಸಿ, ಯಾವುದೇ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಸದಂತೆ ಆದೇಶ ನೀಡಿದರು.

ಗುಡಂಗಡಿ ತೆರೆಯಲು ಅವಕಾಶವಿಲ್ಲ:  ಜಾತ್ರೆ‌ ರದ್ದಾದ ಕಾರಣ ಗ್ರಾಮಸ್ಥರಾಗಲಿ ಅಥವೆ ಬೇರೆಡೆಯಿಂದ ಬಂದು ಆಟಿಕೆ ಸಾಮಾನು, ಸ್ಟಿಟ್ ಸೇರಿದಂತೆ ಇತರೆ ಅಂಗಡಿಗಳನ್ನು ಹಾಕಲು ಅವಕಾಶ ಇರುವುದಿಲ್ಲ ಎಂದು ತಿಳಸಿದ್ದಾರೆ‌.

ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲದೇವರು, ವಾಡಿ ಠಾಣೆ ಪಿಎಸ್ ಐ ವಿಜಯಕುಮಾರ್ ಬಾವಗಿ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾಮದ ಪ್ರಮುಖರಾದ ಜುಮ್ಮಣ್ಣ ಪೂಜಾರಿ, ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ವಿಜಯಕುಮಾರ್ ಕುಲಕರ್ಣಿ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ ಬಳವಡಗಿ, ಗಿರಿಮಲ್ಲಪ್ಪ ಕಟ್ಟಿಮನಿ, ರುದ್ರಮುನಿ ಮಠಪತಿ, ಖಾದರ್ ಪಟೇಲ್, ರಾಜಶೇಖರ ಪಠಪತಿ, ಅರವಿಂದ ಸಾಹುಕಾರ, ಚನ್ನು ಸುಣಗಾರ, ವಿಲಾಸ ಕುಲಕರ್ಣಿ, ಗೋವಿಂದಪ್ಪ ಸಾಹು, ರಮೇಶ. ಡಿ.ಸಿ. ಶಾಂತಿ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here