ಪೌರ ಕಾರ್ಮಿಕರ ಹೋರಾಟಕ್ಕೆ ಅರಸು ಪ್ರತಿಮೆ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಕಲಾಕುಟ ಬೆಂಬಲ

0
46

ಮೈಸೂರು: ಮಹಾನಗರ ಪಾಲಿಕೆ ಒಳಚರಂಡಿ ಸಂಘ ಹಲವಾರು ಬೇಡಿಕೆಗಳನ್ನು ಈಡೇರಿಸುವನಂತೆ ಮಹಾ ನಗರ ಪಾಲಿಕೆ ಮುಂಬಾಗ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಮಹಾ ನಗರ ಪಾಲಿಕೆ ಮೌನವಾಗಿರುದನ್ನು ಖಂಡಿಸಿ ಅರಸು ಪ್ರತಿಮೆ ಪ್ರತಿಸ್ಥಾನ ಸಮಿತಿ ಕನ್ನಡ ಸಾಹಿತ್ಯ ಕಲಾಕುಟ ಪೌರ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದೆ.

ದೇಶದಲ್ಲಿ ಸ್ವಚ್ಛ ನಗರಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಮೈಸೂರಿಗೆ ಆ ಸ್ವಚ್ಛತೆಯನ್ನು ನಿರ್ವಹಿಸುವ ಒಳಚರಂಡಿ ಹಾಗೂ ಪೌರ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿರುವುದ ಖಂಡನೀಯ ಅವರ ಪ್ರಮುಖ ಬೇಡಿಕೆಗಳಾದ ಬೆಳಗ್ಗಿನ ಉಪಹಾರ ಭತ್ಯೆ ಹಾಗೂ ತಮ್ಮ ಕೆಲಸವನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ಈ ಕೊಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಜಾರಿಗೊಳಿಸವ ಮೂಲಕ ಕೆಳಸ್ತರದ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ಗನಹರಿಸಿ ಅನುಷ್ಠಾನ ಗೊಳಿಸಬೇಕು ನಿರ್ಲಕ್ಷ್ಯ ಧೋರಣೆ ತೋರಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಂ.ಚಂದ್ರಶೇಖರ್ ,ಅಧ್ಯಕ್ಷರು ಕನ್ನಡ ಸಾಹಿತ್ಯ ಕಲಾಕುಟ ಮೈಸೂರು ತಿಳಿಸಿದರು ಅರಸು ಪ್ರತಿಮೇ ಪ್ರತಿಸ್ಥಾನ ಸಮಿತಿ ಅಧ್ಯಕ್ಷರಾದ ಜಾಕೀರ್ ಹುಸೇನ್ ಮಾತನಾಡಿ ಮಹಾನಗರ ಪಾಲಿಕೆಯ ಒಳಚರಂಡಿ ಕಾರ್ಮಿಕರಾದ 231 ಜನರ ಬೇಡಿಕೆ ಈಡೇರಿಸಿ ಸ್ವಚ್ಛ ನಗರಿ ಹೆಸರನ್ನು  ಚಿರಸ್ಥಾಯಿಗೊಳಿಸುವಂತೆ ಹಾಗೂ ಕಾರ್ಮಿಕರ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಕನ್ನಡ ಹೋರಾಟಗಾರರಾದ ಡೈರಿ ವೆಂಕಟೇಶ್ ಕೊಡ ಈ ಒಂದು ಪೌರ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here