ಸರ್ಕಾರಗಳ ನೀತಿಗಳಿಂದ ಸ್ಲಂ ಜನರ ಮೇಲೆ ತಾರತಮ್ಯ: ಎ.ನರಸಿಂಹಮೂರ್ತಿ

0
67

ಕಲಬುರಗಿ: ಸ್ಲಂ ಜನಾಂದೋಲನಾ ಕರ್ನಾಟಕ ಜಿಲ್ಲಾ ಘಟಕದಿಂದ ಜಿಲ್ಲಾ ಸಮಿತಿ ಪದಾಧಿಕಾರಿಗಳಿಗೆ ಪ್ರಚಲಿತ ವಿದ್ಯಾಮಾನಗಳ ಕುರಿತು ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ರಾಜ್ಯಸಂಚಾಲಕ ಎ.ನರಸಿಂಹಮೂರ್ತಿ  ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಕಲ್ಯಾಣಗಳಿಗಾಗಿ ತೋರಿ ಶ್ರೀಮಂತರ ಹಿತ್ತಾ ಕಾಯುತ್ತೇನೆ ಹಾಗಾಗಿ ನಗರ ಪ್ರದೇಶದಲ್ಲಿರುವ ಸ್ಲಂ ಜನರ ಬಡಜನರ ಗ್ಯಾಸ್ ಸಬ್ಸಿಡಿ, ವಿದ್ಯುತ್ ಬೆಲೆ ಏರಿಕೆ, ಪೇಟ್ರೋಲ್, ಡಿಸೇಲ್ ಬೆಲೆಏರಿಕೆ ಮಾಡಿ ಜನಸಾಮಾನ್ಯರ ಜೀವನದ ಮೇಲೆ ಪ್ರಭಾವ ಬೀರುತ್ತವೆ ಆದರೆ ಜನರ ದುಡಿಮೆಗೆ ತಕ್ಕ ಕೂಲಿ/ವೇತನ ನೀಡದೆ ಬೆಲೆ ಏರಿಕೆ ಮಾಡಿ ಜನರನ್ನು ಹೆಚ್ಚೆಚ್ಚು ತೆರಿಗೆದಾರರನ್ನಾಗಿಸಿ ಪ್ರಜೆಗಳಿಂದ ಗ್ರಾಹಕರನ್ನಾಗಿ ಪರಿವರ್ತಿಸುವುದೇ ಈ ಬದಲಾವಣೆಯನ್ನು ಸಂಘಟನೆಯಲ್ಲಿರುವ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಅರ್ಧವಂತಿಕೆಯ ವರ್ತಿಸುವುದಕ್ಕೆ ಅನುಗುಣವಾಗಿ ನಮ್ಮ ಹೋರಾಟ ರೂಪಿಸಬೇಕಾಗಿದೆ ಎಂದರು.

Contact Your\'s Advertisement; 9902492681

ಇತ್ತೀಚಿಗೆ ಜಿಲ್ಲಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಸ್ಲಂ ಜನಾಂದೋಲನಾ ಕರ್ನಾಟಕದ ಗುರಿ ಉದ್ದೇಶಗಳ ಕುರಿತು ವಿಭಾಗೀಯ ಸಂಯೋಜಕರಾದ ಜನಾರ್ಧನ ಹಳ್ಳಿಬೆಂಚಿ ಮಾತನಾಡಿ ನಮ್ಮ ಗುರಿ ಕೊಳಚೆ ಪ್ರದೇಶದ ನಿವಾಸಿಗಳಾದ ಸಂವಿಧಾನದ ಆಶಯವಾದ ಸಾಮಾಜಿಕ ನ್ಯಾಯಾಂಗವನ್ನು ದೊರಕಿಸಿಕೊಂಡ ಆಶಯದೊಂದಿಗೆ ಬಾಕಿ ವ್ಯವಸ್ಥೆ ಹಾಗೂ ಖಾಸಗೀಕರಣ ಪ್ರೇರಿತ ನೀತಿಗಳ ವಿರುದ್ಧ ಆಂದೋಲನಾ ಕಟ್ಟಿ ನಗರವಂಚಿತ ಸಮುದಾಯಗಳಿಗೆ ಮಾನವ ಘನತೆಗಾಗಿ ಶ್ರಮಿಸುವುದಾದರೆ.

ಇದಕ್ಕಾಗಿ ನಾವು ಸಾಮಾಜಿಕ ನಾಯಕತ್ವದಲ್ಲಿ ಸಂಘಟನೆ ಗಟ್ಟಿಯಾಗಬೇಕು ಹಾಗೂ ಬಡತನ ಮುಕ್ತ ನಗರಗಳನ್ನು ಮತ್ತು ತಾರತಮ್ಯ ನಗರಗಳನ್ನಾಗಿ ನಿರ್ಮಾಣವಾಗಲು ಹೆಜ್ಜೆ ಹಾಕಬೇಕಾಗಿದೆ, ಹಾಗಾಗೀ ನಾವೇಲ್ಲರೂ ಸಂಘಟನೆಯ ದೇಹಕ್ಕೆ ಅನುಸಾರವಾಗಿ ಕೆಲಸ ಮಾಡಬೇಕು ಭಾಗವಹಿಸಿದವರು ಅಧ್ಯಕ್ಷೆ ಹಾಗೂ ಕಾರ್ಯಕ್ರಮ ಸಂಚಾಲಕಿ ರೇಣುಕಾ ಸರಡಗಿ, ಕಾರ್ಯದರ್ಶಿ ಸುನೀತಾ ಎಮ್.ಕೊಲ್ಲೂರ, ಖಜಾಂಚಿ ಸುನೀಲ ಕರಹರಿ, ವಿಕಾಸ ಸವರಿಕರ್,  ಸವಿತಾ,  ರಾಶಿ ರಾಠೋಡ,  ಅಲ್ಲಮಪ್ರಭು ನಿಂಬರ್ಗಾ ಸ್ಲಂ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here