ಕಲಬುರಗಿ: ಸಣ್ಣೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಾಳಾ ಗ್ರಾಮದಲ್ಲಿ ಬರುವ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಗ್ರಾಮಸ್ಥರಿಂದ ಹಾಗೂ ಯುವಕರಿಂದ ಗೌರವವನ್ನು ಸಲ್ಲಿಸಲಾಯಿತು.
ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಅಭ್ಯರ್ಥಿಗಳು
ಸೂರ್ಯಕಾಂತ್ .ಬಿ. ಪೊಲೀಸ್ ಪಾಟೀಲ್. ಗೌಡಪ್ಪಗೌಡ .ಸಿ. ಪಾಟೀಲ್. ಮಾಪಣ್ಣ .ಎಸ್. ತಳಕೇರಿ . ಶಿವಯೋಗಿ ಭಜಂತ್ರಿ, ಭೀಮಶಂಕರ್ ಸುಬೇದರ್. ಚಂದ್ರಶೇಖರ್ ಪೂಜಾರಿ ಆಯ್ಕೆಯಾದ ನೂತನ ಸದಸ್ಯರಾದ ಗ್ರಾಮದ ಅಭಿವೃದ್ಧಿಗೆ ನಮ್ಮ ಮುಂದಿನ ಯೋಜನೆಯಾಗಿದ್ದು ಕೆಲಸ ಮಾಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದು.
ಗ್ರಾಮದಲ್ಲಿನ ಹಲವಾರು ಸಮಸ್ಯೆಗಳು ಹಾಗೂ ಕುಂದು ಕೊರತೆಗಳಿಗೆ ಮೊದಲು ನಾವು ಸ್ಪಂದಿಸುತ್ತಿದೆ ಎಂದು ಭರವಸೆ ನೀಡಿದ್ದು ಕುಡಿಯುವ ನೀರು, ಒಳಚರಂಡಿಯ ವ್ಯವಸ್ಥೆ, ಹೊಸದಾಗಿ ಶೌಚಾಲಯಗಳ ನಿರ್ಮಾಣ, ಗ್ರಾಮದಲ್ಲಿನ ಸಿಸಿ ರಸ್ತೆ ಗಳ ನಿರ್ಮಾಣ, ಗ್ರಾಮೀಣ ಅಡಿಯಲ್ಲಿ ಬರುವ ನರೇಗ ದಿಂದ ( ಉದ್ಯೋಗ ಖಾತ್ರಿ ) ಅನುದಾನ ಪಡೆದು, ಬೀದಿದೀಪ ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು. ಜತೆಗೆ ಈಗಿನ ಪರಿಸ್ಥಿತಿಯಲ್ಲಿ ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಬೇಕು. ಪ್ರತಿ ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು. ಎಲ್ಲರಲ್ಲಿ ವಿಶ್ವಾಸ ಗಳಿಸಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಡಬೇಕ, ಗ್ರಾಮಸ್ಥರು ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮನವಿ ಮಾಡಿದರು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಗ್ರಾಮದ ಹಿರಿಯರಾದ ಮಹಾದೇವ ದಂಡಿನಕರ್ .ಸುಭಾಷ್ ತಳಕೇರಿ.
ಬಸವರಾಜ್ ಪಾಳಾ .ಸುಧಾಕರ ಪಾಳಾ. ನವೀನ ಪಾಳಾ. ರಾಣಪ್ಪ ಪಾಳಾ, ಹುಸೇನಿ ಪಾಳಾ . ಗಣೇಶ ಪಾಳಾ, ಚಂದ್ರಕಾಂತ ಪಾಳಾ , ಶಿವಾನಂದ ಪಾಳಾ, ಸಿದ್ಧಮ್ಮ ಹೂಗಾರ, ಯಂಕಪ್ಪ ಕಾಳನೂರು, ಚಂದ್ರಕಾಂತ ವಡ್ಡೆರಾಜ,ಮಲ್ಲಿನಾಥ ಮಾಲೆ. ಖತಲಪ್ಪ ಪಾಳಾ ಇನ್ನಿತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.