ಸಹ್ಯಾದ್ರಿ ಕ್ಯಾಂಪಸ್ ಉಳಿಸಲು ವಿದ್ಯಾರ್ಥಿಗಳು ರಸ್ತೆ ತಡೆ: ಕ್ಯಾಂಪಸ್ ಫ್ರಂಟ್ ಬೆಂಬಲ

0
22

ಶಿವಮೊಗ್ಗ : ಜಿಲ್ಲೆಯ ಶಿಕ್ಷಣ ಕೇಂದ್ರ ಬಿಂದು ಆಗಿರುವ ಸಹ್ಯಾದ್ರಿ ಕಾಲೇಜಿನ ಮೈದಾನವನ್ನು ಖೇಲೋ ಇಂಡಿಯಾ ಯೋಜನೆಯ ವಿಶೇಷ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣ ಮಾಡುತ್ತಿರುವುದನ್ನು ಖಂಡಿಸಿ “ಸಹ್ಯಾದ್ರಿ ಕ್ಯಾಂಪಸ್ ಉಳಿಸಿ” ಹೋರಾಟ ಸಮಿತಿಯಿಂದ ಇಂದು ಪ್ರತಿಭಟನಾ ವೆರವಣಿಗೆ ಹಾಗೂ ರಸ್ತೆ ತಡೆ ನಡಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಪ್ರತಿಭಟನೆಯನ್ನು ಬೆಂಬಲಿಸಿ ಕ್ಯಾಂಪಸ್ ಫ್ರಂಟ್ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಮುಜಾಹೀದ್, ಜಿಲ್ಲಾ ಕಾರ್ಯದರ್ಶಿ ಲುಕ್ಮನ್, ಸಮಿತಿ ಸದಸ್ಯರಾದ ಫರೋಜ್, ಅಪ್ರೋಜ್ ಹಾಗೂ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here