ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿರುವ ಬರೇಹಿಲ್ಸ್ ಸರ್ಕಲ್ ಟ್ರಾಮಾ ಸೆಂಟರ್ನಲ್ಲಿ ನೂತನ ಮನುರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಖಾಜಾ ಬಂದನಾವಾಜ್ ವಿಶ್ವವಿದ್ಯಾಲಯದ ನಿರ್ದೇಶಕರಾದ ಜನಾಬ್ ಡಾ. ಸೈಯದ್ ಮುಸ್ತಫಾ ಅಲ್ ಹುಸೇನಿ ಸಾಹೇಬ್ ಅವರು ಉದ್ಘಾಟಿಸಿದರು.
ಎಂಎಲ್ಸಿ ಶಶಿಲ್ ಜಿ. ನಮೋಶಿ, ಆಸ್ಪತ್ರೆಯ ಮಾಲಿಕ ಡಾ.ಫಾರುಕ್ ಮನುರ್, ನಿವೃತ್ತ ವಾಣಿಜ್ಯ ಅಧಿಕಾರಿ ಬಿಎಸ್ಎನ್ಎಲ್ ಎಂಡಿ. ಅಲ್ಹಜ್ ಬಾಬು ಮಿಯಾನ್ ಮನುರ್, ಡಾ.ಉಸಮಾನ, ಸುಭಾಷ್ ಗುಟ್ಟೆ, ಅಲ್ಲಂಪ್ರಭು ಪಾಟೀಲ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.