ಕಲಬುರಗಿ: ಭೋಸಗಾ ಕ್ರಾಸ್ನಲ್ಲಿ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ನೂತನ ಕಾಯ್ದೆಗಳ ಪ್ರತಿಗಳನ್ನು ದಹಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಕೃಷಿ ಶಾಸನ, ಕಾರ್ಮಿಕ ಸಂಹಿತೆಗಳು, ವಿದ್ಯುತ್ ಮಸೂಸೆ ವಾಪಸ್ ಪಡೆಯುವುದರ ಜತೆಗೆ ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಗೋಳಿಸಬೇಕು ಬಡ ಕುಂಟುಂಬಗಳಿಗೆ ಮಾಸಿಕ 7500 ರೂ. ನಗದು ವರ್ಗಾವಣೆ, ತಲಾ 10 ಕೆಜಿ ಆಹಾರಧಾನ್ಯ ನೀಡಬೇಕು, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ರಕ್ಷಣಾ ಯೋಜನೆ ರೂಪಿಸಬೇಕು ನೂತನ ಶೊಕ್ಷಣ ನೀತಿ ಎನ್ಪಿಎಸ್ ರದ್ದುಪಡಿಸಬೇಕು ಇತರ ಬೇಡಿಕೆಗೆ ಸ್ಪಂದಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ್, ಅಂಜನಾ, ರಾಣಮ್ಮ, ಶಾಂತಾ, ಲಕ್ಷ್ಮೀ, ಮಹಾನಂದ, ಶ್ರೀದೇವಿ, ಜಯಶ್ರೀ, ಅನ್ನಪೂರ್ಣ ಇದ್ದರು.