ಸುರಪುರ ಕನ್ನಡ ಸಾಹಿತ್ಯ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

0
19

ಸುರಪುರ: ಈ ಹಿಂದೆ ಮಾಜಿ ಸಚಿವರಾದ ರಾಜಾ ಮದನಗೋಪಾಲ ನಾಯಕ ಅವರ ನಿಧನದಿಂದ ತೆರವಾಗಿದ್ದ ಸುರಪುರ ಕನ್ನಡ ಸಾಹಿತ್ಯ ಸಂಘಕ್ಕೆ ಈಗ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.ಸಂಘದ ಸದಸ್ಯರ ಅಭಿಪ್ರಾಯದಂತೆ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಮುಖಂಡ ಬಸವರಾಜ ಜಮದ್ರಖಾನಿ ಅವರನ್ನು ನೇಮಕಗೊಳಿಸಿ,ಜಮದ್ರಖಾನಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅದರಂತೆ ಇನ್ನುಳಿದ ಪದಾಧಿಕಾರಿಗಳಲ್ಲಿ ಉಪಾಧ್ಯಕ್ಷರಾಗಿ ನ್ಯಾಯವಾದಿ ಜೆ.ಅಗಸ್ಟಿನ್ ಹಾಗು ಜಯಲಲಿತಾ ಪಾಟೀಲ, ಪ್ರ.ಕಾರ್ಯದರ್ಶಿಗಳಾಗಿ ಶ್ರೀನಿವಾಸ ಜಾಲವಾದಿ, ಕಾರ್ಯದರ್ಶಿಯಾಗಿ ರಾಜಶೇಖರ ದೇಸಾಯಿ, ಸಹಕಾರ್ಯದರ್ಶಿಯಾಗಿ ರಾಘವೇಂದ್ರ ಕುಲಕರ್ಣಿ ಬಾಡಿಯಾಳ, ಕೋಶಾಧ್ಯಕ್ಷರಾಗಿ ಗೋವರ್ಧನ ಝಂವ್ಹಾರ ಇನ್ನುಳಿದಂತೆ ಸದಸ್ಯರಾಗಿ ಡಾ.ರಾಘವೇಂದ್ರ ಗುಡಗುಂಟಿ, ಬೀರಣ್ಣ.ಬಿ.ಕೆ.ಆಲ್ದಾಳ, ಯಲ್ಲಪ್ಪ ಹುಲಕಲ್, ಉಪೇಂದ್ರನಾಯಕ ಸುಬೇದಾರ, ಕುತ್ಬುದ್ದಿನ್ ಅಮ್ಮಾಪುರ, ಶಿವುಕುಮಾರ ಅಮ್ಮಾಪುರ, ಶರಣುಕುಮಾರ ಜಾಲಹಳ್ಳಿ, ಈಶ್ವರ ಶಹಾಪೂರಕರ್, ಸಂದೀಪ ಜೋಶಿ, ಪ್ರಕಾಶಚಂದ ಜೈನ್ ಅವರನ್ನು ಹಾಗು ಮಹಿಳಾ ಸದಸ್ಯರಾಗಿ ಗೀತಾರಾಣಿ ಕಟ್ಟಿಮನಿ, ಅಲಕನಂದ.ಐ.ಜಿ., ಕುಮಾರಿ ರತ್ನ ಅವರನ್ನು ನೇಮಿಸಲಾಯಿತು.

Contact Your\'s Advertisement; 9902492681

ವಿಶೇಷ ಆಹ್ವಾನಿತರನ್ನಾಗಿ ರಾಘವೇಂದ್ರ ಭಕ್ರಿ, ದೇವು ಹೆಬ್ಬಾಳ, ವೆಂಕಟೇಶ ಪಾಟೀಲ, ಮುದ್ದಪ್ಪ ಅಪ್ಪಾಗೋಳ, ನಬೀಲಾಲ ಮಕಾನದಾರ, ಕಮಲಾಕರ.ಎ.ಕೆ., ಪಂಡಿತ ನಿಂಬೂರೆ, ಕೇದಾರನಾಥ ಶಾಸ್ತ್ರಿ, ಶ್ರೀಹರಿರಾವ್ ಆದವಾನಿಯವರನ್ನು ನೇಮಕಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here