ಬಸ್ ಹರಿದು ನಾಲ್ವರಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲಿಸಿದ ಶಾಸಕ ರಾಜುಗೌಡ

0
124

ಸುರಪುರ: ನಗರದ ಕುಂಬಾರಪೇಟೆಯ ಹನುಮಾನ್ ದೇವಸ್ಥಾನದ ಬಳಿಯಲ್ಲಿ ಬಸ್ ಹರಿದು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ತಾಲೂಕಿನ ದೇವಾಪುರ ಗ್ರಾಮದ ವ್ಯಕ್ತಿಗಳು ಬೈಕ್ ಮೇಲೆ ಸುರಪುರಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದರು,ಈ ಸಂದರ್ಭದಲ್ಲಿ ಸುರಪುರ ಕಡೆಯಿಂದ ಮುದ್ದೇಬಿಹಾಳಕ್ಕೆ ಹೊರಟ ಬಸ್ಸು ವೇಗವಾಗಿ ಬರುವುದನ್ನು ಕಂಡು ಬೈಕ್ ಸವಾರರು ಪಕ್ಕಕ್ಕೆ ನಿಂತಿದ್ದು,ವೇಗವಾಗಿ ಬಂದ ಬಸ್ಸು ಪಕ್ಕದಲ್ಲಿ ನಿಂತಿದ್ದ ನಾಲ್ವರ ಮೇಲೆ ಹರಿದಿದೆ.

Contact Your\'s Advertisement; 9902492681

ಇದರಿಂದಾಗಿ ದೇವಾಪುರ ಗ್ರಾಮದ ವ್ಯಕ್ತಿಗಳಾದ ಹುಸೇನ್ ದಸ್ತಗೀರ್ ಮಹಿಬೂಬ ಹಾಗು ಖಾಜಾಸಾಬ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಅಲ್ಲದೆ ಈ ಅಪಘಾತದಲ್ಲಿ ಯುವಕನ ಬಲಗೈ ಸಂಪೂರ್ಣವಾಗಿ ತುಂಡರಿಸಿದ್ದು ನೋಡಿದವರ ಎದೆ ನಡುಗಿಸಿದೆ.ಅಲ್ಲದೆ ಬಸ್‌ನ ಚಕ್ರಕ್ಕೆ ಸಿಲುಕಿದ ಹಸು ಒಂದು ಸ್ಥಳದಲ್ಲಿಯೇ ಸಾವನ್ನಪ್ಪಿದೆ ಹಾಗು ಒಂದು ಎಮ್ಮೆಗು ಕೂಡ ಗಂಭೀರವಾಗಿ ಗಾಯಗಳಾಗಿವೆ.

ಇನ್ನು ಅಪಘಾತ ನಡೆದ ಸಂದರ್ಭದಲ್ಲಿ ಇದೇ ರಸ್ತೆಯ ಮೂಲಕ ಸುರಪುರ ನಗರಕ್ಕೆ ಹೊರಟಿದ್ದ ಶಾಸಕ ನರಸಿಂಹ ನಾಯಕ (ರಾಜುಗೌಡ) ತಕ್ಷಣಕ್ಕೆ ತಮ್ಮ ವಾಹನದಿಂದ ಇಳಿದು ಗಾಯಗೊಂಡು ನರಳುತ್ತಿದ್ದವರನ್ನು ಆಟೋದಲ್ಲಿ ಹತ್ತಿಸಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಎಎಸ್‌ಐ ಬಾಗಣ್ಣ ಹಾಗು ಹೆಚ್‌ಸಿ ಬಸವರಾಜ ಮುದಗಲ್ ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.

ಗಾಯಗೊಂಡ ಎಲ್ಲರಿಗು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here