ಆದರ್ಶ ಶ್ರಮ ಜೀವಿ ಡಾ. ಗಳಂಗಳಪ್ಪ ಪಾಟೀಲ: ಮಾಲೆ

0
32

ಕಲಬುರಗಿ: ಹೆಚ್ಚು ವಿದ್ಯಾಭ್ಯಾಸ ಮಾಡದಿದ್ದರು ಚರುಕು ಬುದ್ಧಿ ಆದರ್ಶ ಕಾಯಕ ಜೀವಿ, ಶ್ರದ್ಧೆಯಿಂದ ಹಿಡಿದ ಕೆಲಸವನ್ನು ಮಾಡಿ ಮುಗಿಸುವ ಛಲಗಾರ ವ್ಯಕ್ತಿ ಡಾ. ಗಳಂಗಳಪ್ಪ ಪಾಟೀಲ ಅವರು ಆಗಿದ್ದರೆಂದು ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮಾರುತಿರಾವ ಡಿ. ಮಾಲೆ ಅವರು ಬಣ್ಣಿಸಿದ್ದಾರೆ.

ನಗರದ ಚಂದ್ರಕಾಂತ ಪಾಟೀಲ ಸ್ಮಾರಕ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಡಾ. ಗಳಂಗಳಪ್ಪ ಪಾಟೀಲರವರ ೧೦೧ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಡಾ. ಗಳಂಗಳಪ್ಪ ಪಾಟೀಲ ರವರ ಆದರ್ಶಗಳು ಯುವ ಜನಾಂಗಕ್ಕೆ ಮಾದರಿ ಯಾಗಿದೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಾರ್ಯಕ್ರಮ ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡು ಗಣ್ಯರಿಂದ ಜ್ಯೋತಿ ಬೆಳಗಿಸುವರೊಂದಿಗೆ ಅತಿಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ.ಬಿ.ಜಿ.ಪಾಟೀಲರವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರೋ. ವಿ. ಜಿ. ಅಂದಾನಿ, ಕೆ. ಎಸ್. ಮಾಲಿ ಪಾಟೀಲ, ಡಾ. ಸ್ವರೂಪ್ ರಂಜನ್, ಡಾ. ಕೈಲಾಸ. ಬಿ. ಪಾಟೀಲ್, ಹಾಗೂ ಶಾಲೆಯ ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಮಂಜುನಾಥ ಜಿ.ಟಿ.ಎಸ್. ರವರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here