ಸುರಪುರದಲ್ಲಿ ಸಾಧನಾ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಆರಂಭ

0
38

ಸುರಪುರ: ನಗರದ ಬಡಿಗೇರಬಾವಿ ಬಳಿಯ ಕಾಳಿಕಾದೇವಿ ದೇವಸ್ಥಾನದ ಸಭಾ ಭವನದಲ್ಲಿ ಶ್ರೀ ಅಂಬಿಗರ ಚೌಡಯ್ಯ ಶೈಕ್ಷಣಿಕ ಹಾಗು ಸಾಂಸ್ಕೃತಿಕ ಕಲಾ ಸಂಘದ ಉದ್ಘಾಟನೆ ಹಾಗು ಸಧನಾ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಯನ್ನು ಉದ್ಘಾಟಿಸಿದ ಪ್ರಾಧ್ಯಾಪಕ ಬಲಭೀಮ ದೇಸಾಯಿ ಮಾತನಾಡಿ,ಇಂದು ಅನೇಕ ಸಂಸ್ಥೆಗಳು ಕೇವಲ ಸರಕಾರದ ಯೋಜನೆಗಳ ಲಾಭ ಪಡೆಯಲು ಹುಟ್ಟಿಕೊಳ್ಳುತ್ತವೆ,ಆದರೆ ಶ್ರೀ ಅಂಬಿಗರ ಚೌಡಯ್ಯನವರ ಹೆಸರಿನ ಈ ಸಂಸ್ಥೆ ಜನರ ಉಪಯೋಗಕ್ಕೆ ಮುಂದಾಗಲಿ ಹಾಗು ಸ್ಪರ್ಧಾತ್ಮಕ ಸಂಸ್ಥೆಯ ಮೂಲಕ ತಾಲೂಕಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಅಂಬಿಗವ ಚೌಡಯ್ಯನವರ ಜಯಂತಿ ಕುರಿತು ಉಪನ್ಯಾಸ ನೀಡಿದ ಮೈಲಾರಲಿಂಗೇಶ್ವರ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಡಾ: ಮಲ್ಲಿಕಾರ್ಜುನ ಕುಲಕರ್ಣಿ ಮಾತನಾಡಿ,೧೨ನೇ ಶತಮಾನದ ಬಸವಾದಿ ಶರಣರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬ ಪ್ರಮುಖ ಶರಣರಾಗಿದ್ದರು,ಅಲ್ಲದೆ ಅವರು ಬರೆದ ಎಲ್ಲಾ ವಚನಗಳು ಸಮಾಜದಲ್ಲಿನ ಅಂಕುಡೊಂಕುಗಳನ್ನು ಮೂಢನಂಬಿಕೆ ಕಂದಾಚಾರಗಳನ್ನು ನೇರವಾಗಿ ಖಂಡಿಸಿದ್ದಾರೆ,ಅಲ್ಲದೆ ಅವರು ಬರೆದ ವಚನಗಳು ಸಂಶೋಧನೆಗೆ ಯೋಗ್ಯವಾಗಿವೆ,ಅಂತಹ ವಚನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷರಾದ ಶ್ರೀನಿವಾಸ ಜಾಲವಾದಿ ಸಾಹಿತಿ ಬೀರಣ್ಣ ಬಿ.ಕೆ ಇತರರು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜನನಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ: ಮಲ್ಲಿಕಾರ್ಜುನ ಕಮತಗಿ ಶಿಕ್ಷಕ ಹೆಚ್.ವಾಯ್ ರಾಠೋಡ ಶರಣಬಸವ ಯಾಳವಾರ ವೇದಿಕೆ ಮೇಲಿದ್ದರು,ರಾಘವೇಂದ್ರ ಭಕ್ರಿ ಸ್ವಾಗತಿಸಿದರು ಅನೀಲಕುಮಾರ ಜಿ.ಕೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here