ಚಿತ್ತಾಪುರ: ಮೂರು ಜನ ರೈತರಿಗೆ ಕೃಷಿ ಪ್ರಶಸ್ತಿ

0
18

ಕಲಬುರಗಿ: ಚಿತ್ತಾಪುರ ತಾಲೂಕಿನ ತಹಶೀಲ್ದಾರ ಕಚೇರಿ ಆವರಣದಲ್ಲಿ ಇತ್ತೀಚೆಗೆ ಜರುಗಿದ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಸಾಧನೆಗೈದ ತಾಲೂಕಿನ 3 ಜನ ರೈತರಿಗೆÀ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ತಲಾ 10,000 ರೂ.ಗಳ ನಗದು ಬಹುಮಾನ ನೀಡಿ ಸನ್ಮಾನಿಸಲಾಗಿದೆ ಎಂದು ಚಿತ್ತಾಪುರ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಮೊಗಲಾ ಗ್ರಾಮದ ಚಂದು ಕೇಶು, ಮಾಡಬೂಳ ಗ್ರಾಮದ ಅಸ್ಲಂ ಕಲ್ಯಾಣಿ ಮಹಮ್ಮದ ರಫಿ ಹಾಗೂ ತರಕಸ್‍ಪೇಟ್ ಗ್ರಾಮದ ಶರಣಗೌಡ ಭೀಮಣ್ಣಗೌಡ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿ ಪಡೆದ ಈ ಮೂರು ಜನ ರೈತರು ಸಮಗ್ರ ಕೃಷಿ ನಿರ್ವಹಣೆ ಮಾಡಿ ಆದಾಯ ಹೆಚ್ಚಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here