ಬಿಜೆಪಿ ಓಬಿಸಿ ಮೋರ್ಚಾದಿಂದ ನಿಗಮದ ರಾಜ್ಯ ಅಧ್ಯಕ್ಷ ಆರ್ ರಘು ಕೌಟೀಲಗೆ ಸನ್ಮಾನ

0
32

ಕಲಬುರಗಿ: ನಗರದ ಭಾರತಿಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ನಗರ ಜಿಲ್ಲೆ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಅರವಿಂದ್ ಎಮ್ ಪೋದ್ದಾರ ಅವರು ನಗರಕ್ಕೆ ಆಗಮಿಸಿದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷ ಆರ್ ರಘು ಕೌಟೀಲ ಅವರಿಗೆ ಸನ್ಮಾನಿಸಿದರು.

ಸನ್ಮಾನಸ್ವಿಕರಿಸಿ ಮಾತನಾಡುತ್ತಾ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ದಿಂದ ಗಂಗಾ ಕಲ್ಯಾಣ ಯೋಜನೆ, ಸಾಂಪ್ರದಾಯಿಕ ವ್ರತ್ತಿ, ಶಿಕ್ಷಣ ಸಾಲ ಸೌಲಭ್ಯ, ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳನ್ನು ಹಿಂದುಳಿದ ವರ್ಗಗಳ ಮತ್ತು ಓಬಿಸಿ ಮೋರ್ಚಾ ಮುಖಂಡರು ಸಂಘಟಿತರಾಗಿ ಯೋಜನೆಯ ಉಪಯೋಗ ಪಡೆದು ಕೋಳ್ಳಬೇಕೆಂದು ಹೇಳಿದರು.

Contact Your\'s Advertisement; 9902492681

ಅರವಿಂದ್ ಎಮ್ ಪೋದ್ದಾರ ಎಲ್ಲರನ್ನೂ ಸ್ವಾಗತಿಸಿ ಮಾತನಾಡುತ್ತಾ ನಿಗಮದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಿಇಟಿ ಇದ್ದವರಿಗೆ ಮಾತ್ರ ಸಾಲ ಸೌಲಭ್ಯ ಸಿಗುವ ವ್ಯವಸ್ಥೆ ತೆಗೆದು ಹಿಂದುಳಿದ ವರ್ಗಗಳ ಗ್ರಾಮಾಂತರ, ಬಡ ವಿದ್ಯಾರ್ಥಿಗಳಿಗೆ ಎಲ್ಲರಿಗೂ ಸಾಲ ಸೌಲಭ್ಯ ಸಿಗುವ ವ್ಯವಸ್ಥೆ ಆಗಬೇಕು ಅಂದಾಗ ಮಾತ್ರ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣ ದಿಂದ ಮುಂದು ವರಿಯಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಪ್ರ, ಕಾರ್ಯದರ್ಶಿ ಸಂತೋಷ್ ಮದನೆ, ಶ್ರೀಕಾಂತ ಆಲೂರ, ಗ್ರಾಮಾಂತರ ಜಿಲ್ಲಾ ಬಿಜೆಪಿ ಓಬಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮಿಗನೂರ, ರಾಜ್ಯ ಕಾರ್ಯಕಾರಣಿ ಸದಸ್ಯ ಅಂಬು ಡಿಗ್ಗಿ , ಬಿಜೆಪಿ ಜಿಲ್ಲಾ ವಕ್ತಾರ ಸಾಹೇಬ್ ಗೌಡ ಪಾಟೀಲ್, ಸಹ ವಕ್ತಾರ ದಿಲೀಪ್ , ಉತ್ತರ ಮಂಡಲ ಅಧ್ಯಕ್ಷ ವಿಜಯ ಕೋಂಡಪಳ್ಳಿ, ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಗುತ್ತೇದಾರ್, ಬಾಬುರಾವ್ ಹಾಗರಗುಂಡಗಿ, ಜಯಪ್ಪ ಬಡಿಗೇರ ಖಜಾಂಚಿ, ರವಿ ಅಗಸರ, ನಾಗರಾಜ್ ಪತ್ತಾರ, ಪ್ರಶಾಂತ್ ನಿಂಬಾಳ್ಕರ್, ಸಂತೋಷ್ ಜಾಧವ್, ಅಭಯ್,ಶರಣು ಸುರ್ಯವಂಶಿ, ಅಭಿಷೇಕ್, ಭೀಮಾಶಂಕರ ಪೂಜಾರಿ, ಅಶೋಕ್ ಮಾನೆ, ಶ್ರೀಮಂತ ಮಡಿವಾಳ, ಬಸವರಾಜ ಮ, ಕಿಷ್ಣಾ ಮಾಡ್ಯಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here