ಕಲೆಗಳು ಮನುಷ್ಯನ ಬೌದ್ಧಿಕ ವಿಕಾಸಕ್ಕೆ ಪೂರಕವಾಗಿವೆ: ನಮ್ ಋಷಿ

0
16

ಶಹಾಪುರ: ಸಂಗೀತ,ಸಾಹಿತ್ಯ, ಸಂಸ್ಕೃತಿ,ನೃತ್ಯ ಮುಂತಾದ ಕಲೆಗಳು ಮನುಷ್ಯನ ಬೌದ್ಧಿಕ ವಿಕಾಸಕ್ಕೆ ಹಾಗೂ ಸ್ಪರ್ಧಾತ್ಮಕ ಮನೋಭಾವನೆಯ ಜೊತೆಗೆ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಒಳಿತು ಮಾಡು ಮನಸ ಗೀತ ಖ್ಯಾತಿಯ ಸಾಹಿತಿ ನಮ್ ಋಷಿ ಹೇಳಿದರು.

ನಗರದ ತಾಲ್ಲೂಕು ಕನ್ನಡ ಸಾಹಿತ್ಯ ಭವನದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ಸಗರ ವತಿಯಿಂದ ಹಮ್ಮಿಕೊಂಡಿರುವ ಸಂಗೀತೋತ್ಸವ ಹಾಗೂ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

Contact Your\'s Advertisement; 9902492681

ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತವಾದ ವೇದಿಕೆಯನ್ನು ಸಂಘಸಂಸ್ಥೆಗಳು ಕಲ್ಪಿಸಿಕೊಟ್ಟು ಅವರಲ್ಲಿರುವ ಪ್ರತಿಭೆಯನ್ನು ಹೆಕ್ಕಿ ತೆಗೆಯುವ ಕೆಲಸ ಸಂಘ ಸಂಸ್ಥೆಗಳು ನಿರಂತರವಾಗಿ ಮಾಡಬೇಕಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ಹೇಳಿದರು.

ಇಂದಿನ ಯುವಜನತೆಯ ತಾಳ್ಮೆ,ಏಕಾಗ್ರತೆ,ಸ್ಮರಣಶಕ್ತಿ, ಕ್ರಿಯಾಶೀಲತೆ,ಸೃಜನಶೀಲತೆ, ಮುಂತಾದ ಪ್ರತಿಭೆಗಳು ಉದ್ದೀಪನಗೊಂಡು ಅವರು ಸಮಾಜದಲ್ಲಿ ಉತ್ತಮ ಸಂಸ್ಕಾರ ಪಡೆದು ಅತ್ಯುತ್ತಮ ಜೀವನ ನಡೆಸಲು ಸಾಧ್ಯ ಎಂದು ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾದ ಇಂದೂಧರ ಸಿನ್ನೂರ ಹೇಳಿದರು.

ಈ ಸಮಾರಂಭದ ವೇದಿಕೆ ಮೇಲೆ ಯುವ ಮುಖಂಡರಾದ ಬಾಪುಗೌಡ ದರ್ಶನಾಪುರ,ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ,ಚುಟು ಚುಟು ಅಂತೈತಿ ಗೀತ ಖ್ಯಾತಿಯ ಶಿವು ಬೆರ್ಗಿ,ಪತ್ರಕರ್ತ ಪ್ರಕಾಶ್ ದೊರೆ,ದೇವಿಂದ್ರಪ್ಪ ತೋಟಗೇರ ಹಾಗೂ ಇತರರು ಉಪಸ್ಥಿತರಿದ್ದರು.

ನಂತರ ಜರುಗಿದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ 18 ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿ ತಮ್ಮಕಲಾ ಪ್ರದರ್ಶನವನ್ನು ನೀಡಿರುವುದರ ಪೈಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆ ಪಡೆದ ರುಕ್ಮಿಣಿ ಸುರ್ವೆ ತಂಡ ಬೆಂಗಳೂರು ಸಮೂಹ ಜಾನಪದ ನೃತ್ಯ ಪ್ರದರ್ಶಿಸಿ ಜನರ ಮೆಚ್ಚುಗೆ ಪಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here