ಮ್ಯಾನ್ಹೋಲ್ ದುರಂತ: ಐವರ ವಿರುದ್ಧ ಪ್ರಕರಣ ದಾಖಲು

0
28

ಕಲಬುರಗಿ: ನಿನ್ನೆ ನಗರ ಕೈಲಾಶ್ ನಗರದಲ್ಲಿ ಮ್ಯಾನ್ ಹೋಲ್ ಕ್ಲಿನಿಂಗ್ ಗಾಗಿ ಒಳಗಿಳಿದ ಗುತ್ತಿಗೆ ಕಾರ್ಮಿಕರಿಬ್ಬರು ಮೃತಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ಗಳಾದ ಬಿಲಗುಂದಿ, ನರಸಿಂಹ ರೆಡ್ಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎಸ್.ಪಾಟೀಲ, ಗುತ್ತಿಗೆದಾರ ಶಫಿ ಹಾಗೂ ಸೂಪರ್ ವೈಜರ್ ವಿಜಯಕುಮಾರ್ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ.

Contact Your\'s Advertisement; 9902492681

20 ಅಡಿ ಆಳದ ಡ್ರೈನೇಜ್ ಒಳಗಡೆ ಇಳಿದಿದ್ದು, ಉಸಿರುಗಟ್ಟಿ ಉಮರ್ ಕಾಲೋನಿಯ ನಿವಾಸಿ ಲಾಲ್ ಅಹ್ಮದ್ ಮತ್ತು ರಶೀದ್ ಸ್ಥಳದಲ್ಲೇ ಮೃತಪಟ್ಟಿದರು. ರಾಜ ಅಹ್ಮದ್ ಎಂಬ ಕಾರ್ಮಿಕರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಲಾಲ್ ಅಹ್ಮದ್ ಮತ್ತು ರಶೀದ್ ಕುಟುಂಬಕ್ಕೆ ತಲಾ ಐದು ಲಕ್ಷ ಚೇಕ್ ವಿತರಣೆ ಮಾಡಲಾಗಿದೆ. ನೌಕರಿ ನೀಡುವ ಭರವಸೆ ನೀಡಿರುವುದಾಗಿ ಇಲಾಖೆ ಪತ್ರದಲ್ಲಿ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here