ಹೊಸ ಸಾಲ ನೀಡಲು ರವಿ ನರೋಣಿ ಆಗ್ರಹ

0
96

ಶಹಾಬಾದ: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಸಾಲ ನೀಡಲು ಸರ್ಕಾರ ಮುಂದಾಗುವಂತೆ ಮರತೂರ ಕೃಷಿ ಸಹಕಾರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವಿ ನರೋಣಿ ಆಗ್ರಹಿಸಿದ್ದಾರೆ.

ಈಗಾಗಲೇ ಅತಿಯಾದ ಮಳೆಯಿಂದ ಬೆಳೆಗಳು ಸಾಕಷ್ಟು ಹಾಳಾಗಿ, ರೈತ ವರ್ಗ ಕಂಗಾಲಾಗಿದೆ.ಅಲ್ಲದೇ ಬೆಳೆದಂತ ಬೆಳೆ ಮಂಜಿನಿAದ ಹಾಳಾಗಿದೆ.ಕೂಡಲೇ ತೊಗರಿಗೆ ೮೦೦೦ ರೂ. ಬೆಂಬಲ ನೀಡಬೇಕು.ಅಲ್ಲದೇ ಹೊಸ ಸಾಲ ನೀಡುವ ಮೂಲಕ ರೈತರ ಆರ್ಥಿಕ ಬದುಕಿಗೆ ಕೊಂಚ ಬೆನ್ನೆಲುಬಾಗಿ ನಿಲ್ಲಬೇಕೆಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here