ರಸ್ತೆ  ಸುರಕ್ಷೆ ಜೀವನ ರಕ್ಷೆ ಜಾಗೃತಿ ಅಭಿಯಾನ

0
29

ಕಲಬುರಗಿ: ಗೋದುತಾಯಿ ನಗರದ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಗರ ಪೊಲೀಸ್  ಸಂಚಾರ ಉಪ ವಿಭಾಗ  ಸಂಖ್ಯೆ-೧ರ ವತಿಯಿಂದ ರಸ್ತೆ  ಸುರಕ್ಷೆ ಜೀವನ ರಕ್ಷೆ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಸಂಚಾರಿ ಠಾಣೆ ಪಿಎ ಸ್‌ಐ ಶಂಕರ ಬೆಳಮಗಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಟ್ರಾಫಿಕ್ ನಿಯಮಗಳ ಬಗ್ಗೆ ಹಾಗೂ ಹೇಗೆ  ರಸ್ತೆ ಅಪಘಾತಗಳ ತಡೆಗಟ್ಟುವುದು, ವಾಹನ ಚಲಾಹಿಸುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಹಾಗೂ ದ್ವಿ ಚಕ್ರ ಸವಾರರು ಕಡ್ಡಾಯವಾಗಿ ಹೆಮ್ಮೇಟ್ ಧರಿಸುವ ಬಗ್ಗೆ ಹಾಗೂ ಅತಿವೇಗ ಚಲಿಸುವುದರಿಂದ ಆಗುವ ಅಪಾಯ ಅವಸರವೇ ಅಪಘಾತಕ್ಕೆ ಕಾರಣವೆಂದು ಅರಿವು ಮೂಡಿಸುತ್ತ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ ತಿಳುವಳಿಕೆ ಹೇಳಿದರು.

Contact Your\'s Advertisement; 9902492681

ಟ್ರಾಫಿಕ್ ಪೋಲಿಸ್ ಸಿಬ್ಬಂದಿಗಳಾದ ರಾಜಕುಮಾರ ಪುಣೆ, ಪ್ರೇಮಕುಮಾರ ಚವಾಣ, ಬಾಸ್ಕಿಟ್ ಬಾಲ್ ಕೋಚ್ ಪ್ರವೀಣಕುಮಾರ ಪುಣೆ, ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶಿವಪುತ್ರಪ್ಪಾ ಡೆಂಕಿ, ಪ್ರಾಚಾರ್ಯರಾದ ನಾಗೇಂದ್ರ ಬಡಿಗೇರ್ ಹಾಗೂ ಶಿಕ್ಷಕರು, ಸಿಬ್ಬಂಧಿಗಳು, ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here