ರಾಜಕಾರಣಿಗಳು ಎಂದೂ ಜಗಳವಾಡಲ್ಲ ಜನರು ಜಗಳವಾಡಬೇಡಿ: ಶಾಸಕ

0
92

ಸುರಪುರ: ನಾವು ರಾಜಕಾರಣಿಗಳು ಎಂದೂ ಜಗಳವಾಡಲ್ಲ ಆದ್ದರಿಂದ ಜನರು ಕೂಡ ಯಾವುದೇ ಪಕ್ಷದವರಿರಲಿ ಚುನಾವಣೆ ಬಂದಾಗ ರಾಜಕೀಯ ಮಾಡಿ ನಂತರದಲ್ಲಿ ಎಲ್ಲರು ಒಂದಾಗಿ ಇರುವಂತೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಜನರಲ್ಲಿ iನವಿ ಮಾಡಿದರು.

ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೊಡೇಕಲ್ ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನೆ ರಾಜಕೀಯಕ್ಕಾಗಿ ನಡೆದಿದೆ.ಪೊಲೀಸರು ಸತ್ಯಾಸತ್ಯತೆಯ ಬಗ್ಗೆ ತನಿಖೆ ಮಾಡುತ್ತಾರೆ,ಬಂಧನಕ್ಕೊಳಗಾದವರು ರೌಡಿ ಲಿಸ್ಟಲ್ಲಿದ್ದಾರೆ,ಆದ್ದರಿಂದ ಅವರನ್ನು ವಿಚಾರಣೆಗೆ ಬಂಧಿಸಿದ್ದಾರೆ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಾರೆ.ಆದ್ದರಿಂದ ವಿನಾಕಾರಣ ಪೊಲೀಸರು ಅವರ ಕೆಲಸ ಮಾಡುವುದಕ್ಕೆ ಅಡ್ಡಿಮಾಡುವುದು ಸರಿಯಲ್ಲ.

Contact Your\'s Advertisement; 9902492681

ಇದನ್ನೂ ಸಹ ಓದಿ: ಆಸ್ತಿಗಾಗಿ ದಾಯಾದಿ ಕಲಹ ಹಲವರಿಗೆ ಗಾಯ

ಕೊಡೇಕಲ್ ಭಾಗದ ಜನರಿಗೆ ರಾಜುಗೌಡ ಬಬ್ಲುಗೌಡ ಜನರೊಂದಿಗೆ ಹೇಗಿದ್ದಾರೆ ಎಂದು ಗೊತ್ತಿದೆ ಆದ್ದರಿಂದ ಇದರಿಂದ ನಮಗೇನು ಕೆಟ್ಟ ಹೆಸರು ಬರುವುದಿಲ್ಲ ಎಂದರು.ಅಲ್ಲದೆ ಕಳೆದ ಕೆಲ ದಿನಗಳ ಹಿಂದೆ ನಡೆದ ಬೇವಿನಾಳ ಮತ್ತು ಹಂದ್ರಾಳ ಘಟನೆ ಬಗ್ಗೆ ಮಾತನಾಡಿ,ಪೊಲೀಸರು ತನಿಖೆಯನ್ನು ಮಾಡಲಿ ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ,ಅಲ್ಲದೆ ಯಾರೇ ಯಾವುದೇ ಪಕ್ಷದವರು ತಪ್ಪು ಮಾಡಿದರು ಅವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ,ಆದ್ದರಿಂದ ಪೊಲೀಸರ ಮೇಲೆ ಒತ್ತಡ ಹಾಕುವುದು ಬೇಡ ಹಾಗು ಜನರು ಕೂಡ ಯಾವುದೇ ಗಲಾಟೆಗಳಿಗೆ ಮುಂದಾಗದೆ ಸೌಹಾರ್ಧತೆಯಿಂದಿರುವಂತೆ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here