ಅಟ್ಟದ ಮೇಲೆ ಬೆಟ್ಟದಂಥ ವಿಚಾರ: ಕುಂ. ವೀ. ಅವರ ‘ಬೇಲಿ ಮತ್ತು ಹೊಲ’ ಕೃತಿ ವಿಮರ್ಶೆ ಇಂದು

1
120

ಕಲಬುರಗಿ: ಇಂದು ಸಂಜೆ 6 ಗಂಟೆಗೆ ನಗರದ ಸರಸ್ವತಿ ಗೋದಾಮು ಹತ್ತಿರದ ಸಿದ್ಧಲಿಂಗೇಶ್ವರ ಬುಕ್ ಮಾಲ್ ನಲ್ಲಿ “ಆಟ್ಟದ ಮೇಲೆ ಬೆಟ್ಟದಂಥ ವಿಚಾರ” ಪಾಕ್ಷಿಕ ಪುಸ್ತಕ ವಿಮರ್ಶೆ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಾಶಕರಾದ ಶರಣಬಸವ ಕೊನೇಕ ಅವರು ತಿಳಿಸಿದ್ದಾರೆ.

ಸಾಹಿತಿ ಕುಂ. ವೀರಭದ್ರಪ್ಪನವರ “ಬೇಲಿ ಮತ್ತು ಹೊಲ” ಕೃತಿ ಕುರಿತು ಪತ್ರಕರ್ತ-ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ಅವರು ವಿಮರ್ಶೆ ಮಾಡಲಿದ್ದಾರೆ. ಹಿರಿಯ ವಿಮರ್ಶಕರಾದ ಗುರುಪಾದ ಮರಿಗುದ್ದಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಚಿಂಚೋಳಿಯ ಸಿ.ಬಿ ಪದವಿ ಕಾಲೇಜಿನ ಪ್ರಚಾರ್ಯ ಹಾಗೂ ಸಲಹಾ ಸಮಿತಿ ಸದಸ್ಯರಾಗಿರುವ ಡಾ. ಶ್ರೀಶೈಲ ನಾಗರಾಳ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಿದ್ಧಲಿಂಗೇಶ್ವರ ಬುಕ್ ಮಾಲ್ ಪ್ರಕಾಶಕರಾದ ಬಸವರಾಜ್ ಕೊನೇಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Contact Your\'s Advertisement; 9902492681

ರಿಹಾಬಿಲೇಷನ್ ಸೇಂಟರ್ ಪ್ರಾರಂಭಕ್ಕೆ ಆಗ್ರಹ

ಹಿರಿಯ ಸಾಹಿತಿಗಳಾದ ಪ್ರೊ. ಶಿವರಾಜ ಪಾಟೀಲ ಕಾರ್ಯಕ್ರಮದ ಸಂಯೋಜಕರಾಗಿದ್ದು, ಕನ್ನಡ ಪ್ರಾಧ್ಯಾಪಕರಾದ ಡಾ. ಶರಣಬಸಪ್ಪ ವಡ್ಡನಕೇರಿ ನಿರೂಪಕರಾಗಿದ್ದಾರೆ. ಸಿದ್ಧಲಿಂಗ ಕೊನೇಕ, ಬಸವರಾಜ ಕೊನೇಕ ಸ್ವಾಗತಿಸಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here