ಸಿಎಂ ಯಡಿಯೂರಪ್ಪ ರವರ ಹುಟ್ಟು ಹಬ್ಬ ಆಚರಣೆ

0
31

ಕೋಲಾರ: ಜಿಲ್ಲೆ ಮತ್ತು ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪ ಅವರ 78 ನೇ ಹುಟ್ಟು ಹಬ್ಬವನ್ನು ಕೋಲಾರದ ನಗರಾಭಿವೃದ್ಧಿ ಸದಸ್ಯರಾದ ಆರ್. ಮುರುಗೇಶ್ ರವರ ನೇತೃತ್ವದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕೋಲಾರದ ನಗರಾಭಿವೃದ್ಧಿ ಸದಸ್ಯರಾದ ಆರ್. ಮುರುಗೇಶ್ ರವರು ಮಾತನಾಡಿ ನಮ್ಮ ಪ್ರೀತಿಯ ನಾಯಕರಾದ ಬಿ. ಎಸ್.ಯಡಿಯೂರಪ್ಪ ರವರು ಅತ್ಯಂತ ಅನುಭವಿ ನಾಯಕರು, ಜನ ಸಾಮಾನ್ಯರ ಏಳಿಗೆಗಾಗಿ ದುಡಿಯುತ್ತಿರುವ ನಾಯಕರಾಗಿದ್ದಾರೆ. ಅಲ್ಲದೆ ರೈತರ ಕಲ್ಯಾಣ ಮತ್ತು ಬಡವರ ಸಬಲೀಕರಣಕ್ಕಾಗಿ ಉತ್ತಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.  ಅವರಿಗೆ ಆ ದೇವರು ದೀರ್ಘಾಯಸ್ಸು ಮತ್ತು ಆರೋಗ್ಯಯುತ ಜೀವನ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

Contact Your\'s Advertisement; 9902492681

ವಿಕಲಚೇತನರು ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವಲಂಭಿಗಳಾಗಿ: ಮೀನಾಕ್ಷಿ ಪಾಟೀಲ್

ಈ ಸಂದರ್ಭದಲ್ಲಿ ಸ್ಥಳದಲ್ಲಿ ನೆರೆದಿದ್ದವರಿಗೆ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ಕೋಲಾರದ ನಗರಾಭಿವೃದ್ಧಿ ಸದಸ್ಯರಾದ ಆರ್. ಮುರುಗೇಶ್, ನರಸಿಂಹರಾಜು, ಚಂದ್ರಶೇಖರಯ್ಯ, ಹರೀಶ್, ಕೃಷ್ಣಪ್ಪ, ಆಂಜಿನಪ್ಪ, ಶೇಠಪ್ಪ, ಪಾಪಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here