ವೀರಶೈವ ಮಹಾಸಭಾ ನೂತನ ಪದಾಧಿಕಾರಿಗಳಿಗೆ ಸತ್ಕಾರ

0
16

ಸುರಪುರ: ತಾಲೂಕಿನ ಕರಡಕಲ್ಲದ ಶ್ರೀ ಕೋರಿಸಿದ್ದೇಶ್ವರ ಶಾಖಾಮಠದಲ್ಲಿ ಭಾರತಹುಣ್ಣಿಮೆಯ ಮಾಸಿಕ ಶಿವಾನುಭವಗೋಷ್ಠಿ ಕಾರ್ಯಕ್ರಮದ°è ,ಇತ್ತೀಚಿಗೆ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಸುರಪುರ ತಾಲೂಕ ಘಟಕ ಹಾಗೂ ಯಾದಗಿರಿ ಜಿಲ್ಲಾ ಯುವ ಘಟಕಕ್ಕೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳಿಗೆ ಶ್ರೀಮಠದ ಮೂಲಕ ಪೂಜ್ಯ ಶ್ರೀ ಶಾಂತರುದ್ರಮುನಿ ಮಹಾ ಸ್ವಾಮಿಗಳು ಸನ್ಮಾನಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯಶ್ರೀಗಳು, ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪನೆಗೆ ಕಾರಣೀಭೂತರಾದ ಹಾನಗಲ್ಲ ಕುಮಾರ ಶಿವಯೋಗಿಗಳ ಶ್ರಮವನ್ನು ಹಾಗೂ  ದೂರದೃಷ್ಟಿಯನ್ನು ಸ್ಮರಿಸಿದ ಪೂಜ್ಯರು,ಸಮಾಜದ ಪ್ರಗತಿಗಾಗಿ ಬೆಳವಣಿಗೆಗಾಗಿ ನಿಸ್ವಾರ್ಥದಿಂದ ಸೇವೆ ಸಲ್ಲಿಸಿ ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಕವಿ ಎಂದರೆ ಸಂಸ್ಕೃತಿಯ ಯಜಮಾನ ಇದ್ದಂತೆ: ಶಿವರಂಜನ್ ಸತ್ಯಂಪೇಟೆ

ಈ  ಸಂದರ್ಭದಲ್ಲಿ ಮಹಾಸಭೆಯ ಸುರಪುರ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಂಗಡಿ ಕನ್ನೆಳ್ಳಿ,ಜಿಲ್ಲಾ ಯುವ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಸಿ. ಪಾಟೀಲ್ ಕೆಂಭಾವಿ, ಮಲ್ಲು ಬಾದ್ಯಾಪುರ ಹಾಗೂ ತಾಲೂಕು ಘಟಕದ ಉಪಾಧ್ಯಕ್ಷರುಗಳಾದ ಜಗದೀಶ್ ಸೊನ್ನದ್ ಕೆಂಭಾವಿ, ಸಿದ್ದನಗೌಡ ಹೆಬ್ಬಾಳ್ ,ಸುರಪುರ ತಾಲೂಕ ಯುವ ಘಟಕದ ಅಧ್ಯಕ್ಷ ಶಿವರಾಜ ಕಲಿಕೇರಿ ಹಾಗೂ ಸದಸ್ಯ ಚಂದ್ರಶೇಖರ್ ಡೋಣೂರು ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಮಲ್ಲಯ್ಯಸ್ವಾಮಿ ಪರಸನಹಳ್ಳಿ ನಿರೂಪಿಸಿದರು ಶ್ರೀಮಠದ ವಕ್ತಾರ ಶಿವಪ್ರಕಾಶ್ ಸ್ವಾಮಿ ಸ್ವಾಗತಿಸಿ ದರು ದೇವರಾಜ್ ನಂದಿಗಿರಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here