ಸುರಪುರ:ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ಮೇವು ಭಸ್ಮ

0
119

ಸುರಪುರ: ನಗರದ ಎಸ್‌ಬಿಐ ಬಳಿಯಲ್ಲಿನ ದೊಡ್ಡಿಯೊಂದರಲ್ಲಿ ಗೋಶಾಲೆಯಲ್ಲಿನ ಜಾನುವಾರುಗಳಿಗಾಗಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೇವು ಸುಟ್ಟು ಭಸ್ಮವಾಗಿದೆ.

ಸರ್ದಾರ ಸೇಠ್ ಎಂಬುವವರಿಗೆ ಸೇರಿದ ದೊಡ್ಡಿಯಲ್ಲಿ ಜಾನುವಾರುಗಳಿಗಾಗಿ ಸುಮಾರು ೨೫ ಟ್ರೀಪ್‌ಗಿಂತಲು ಅಧಿಕ ಪ್ರಮಾಣದ ಹುಲ್ಲು ಮತ್ತು ಶೇಂಗಾದ ಒಟ್ಟು ಸಂಗ್ರಹಿಸಿಡಲಾಗಿತ್ತು.

Contact Your\'s Advertisement; 9902492681

ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಸಲು ನಗರಸಭೆ ಅಧ್ಯಕ್ಷರಿಗೆ ಮನವಿ

ಗುರುವಾರ ಸಾಯಂಕಾಲ ಯಾರೋ ಕಿಡಿಗೇಡಿಗಳು ಕಿಡಿಗೇಡಿಗಳು ಬೆಂಕಿ ಹಾಕಿದ್ದರಿಂದ ಹುಲ್ಲು ಸುಟ್ಟಿದೆ ಎಂದು ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.ಬೆಂಕಿಯಿಂದಾಗಿ ಇಡೀ ಪ್ರದೇಶವೆಲ್ಲ ಹೊಗೆಯಿಂದ ತುಂಬಿಕೊಂಡು ಜನರು ಭಯಭೀತಗೊಂಡಿದ್ದರು.

ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವುದರೊಳಗೆ ಎಲ್ಲಾ ಹುಲ್ಲು ಸುಟ್ಟು ಕರಕಲಾಗಿದೆ.ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಯು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here