ದಲಿತರ ಮೇಲಿನ ದೌರ್ಜನ್ಯ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

0
52

ಬೀದರ್: ಚಾಮರಾಜನಗರ್ ಜಿಲ್ಲೆಯ ಶ್ಯಾನಾಡ್ರಹಳ್ಳಿ ತಾಲ್ಲೂಕು ಗುಂಡ್ಲಿಪೇಟ್ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹಾಗೂ ಅರೆ ಬೆತ್ತಲೆ ಮೆರವಣಿಗೆ ಮಾಡಿ ಅವಮಾನಿಸಿದ ಕಿಡಿಗೆಡಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು.

ದಲಿತ ಸೇನೆಯ ಜಿಲ್ಲಾಧ್ಯಕ್ಷ ಶ್ರೀಪತರಾವ್ ದೀನೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಅರುಣ್ ಕುದುರೆ, ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದ ಬಣದ ಜಿಲ್ಲಾ ಸಂಚಾಲಕ ಕಲ್ಯಾಣರಾವ್ ಬೋಸ್ಲೆ, ಶಿವಕುಮಾರ್ ನೀಲಿಕಟ್ಟಿ, ಓಂಪ್ರಕಾಶ್ ಭಾವಿಕಟ್ಟಿ, ಅಶೋಕಕುಮಾರ್ ಮಾಳಗೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕರ್ನಾಟಕದ ರಾಜ್ಯದಲ್ಲಿ ಕಾಂಗ್ರೇಸ್- ಜನತಾದಳ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ನಡೆಸುತ್ತಿರುವವರಿಗೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಜನಾಂಗದ ಮೇಲೆ ಹಾಗೂ ಕೆಲವು ದಿನಗಳ ಹಿಂದೆ ನಡೆದಂತಹ ದಲಿತ ಯುವಕನ ಅರೇ ಬೆತ್ತಲೆ ನಡೆದ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರು ಆಳುವ ಸರ್ಕಾರಗಳು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದನಂತರ ಜನಾಂಗಗಳ ಮೇಲೆ ನಡೆಯುತ್ತಿದ್ದ ಘಟನೆಗಳ ಬಗ್ಗೆ ಸರ್ಕಾರ ಕಣ್ಣುಮುಚ್ಚಿಕೊಂಡು ನಿದ್ರೆ ಮಾಡುತ್ತಿದೆ ಎಂದು ಟೀಕಿಸಿದರು.

ಚಾಮರಾಜನಗರ ಜಿಲ್ಲೆಯ ಶ್ಯಾನಾಡ್ರಹಳ್ಳಿ ತಾಲ್ಲೂಕು ಗುಂಡ್ಲಿಪೇಟ್ ದಲಿತ ಯುವಕನು ಐ.ಎ.ಎಸ್. ಪರೀಕ್ಷೆಯನ್ನು ಬರೆಯಲು ಮೈಸೂರಿನ ಮರಿ ಮಲ್ಲಪ್ಪಾ ಹಿರಿಯ ಪ್ರಾಥಮಿಕ ಶಾಲೆ ಪರೀಕ್ಷೆ ಕೇಂದ್ರಕ್ಕೆ ತಡವಾಗಿ ಹೋದಕಾರಣ ಪರೀಕ್ಷೆಯನ್ನು ಬರೆಯಲು ವಂಚಿತನಾಗಿರುತ್ತಾನೆ. ಇದರಿಂದ ಯುವಕನ ಬೇಸರದಿಂದ ಮೈಸೂರಿನಿಂದ ಗುಂಡ್ಲುಪೇಟೆ ಕಡೆಗೆ ದ್ವಿಚಕ್ರವಾಹನದ ಮೇಲೆ ಗ್ರಾಮಕ್ಕೆ ಬರುತ್ತಿದ್ದಾಗ ಮಧ್ಯರಾತ್ರಿ ವಾಗ್ವಾಪೂರ್ ಗ್ರಾಮದ ಹತ್ತಿರ ಆತನ ದ್ವಿಚಕ್ರವಾಹನ ಕೆಟ್ಟು ಹೋಗಿದ್ದು. ರಾತ್ರಿ ಹೊತ್ತಿನಲ್ಲಿ ಕೆಲವು ಕಿಡಿಗೆಡಿಗಳು ಪ್ರತಾಪನ ಹತ್ತಿರ ಬಂದು ಜಗಳವಾಡಿ ಹಲ್ಲೆ ಮಾಡಿ ಅವನ ಹತ್ತಿರ ಇದ್ದ ಹಣ ಹಾಗೂ ಇನ್ನಿತರ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಮರುದಿನ ಬೆಳಿಗ್ಗೆ ಆಶ್ರಯಕ್ಕಾಗಿ ವೀರನ್‌ಪೂರ ಗೇಟ್ ಹತ್ತಿರ ಇರುವ ಶನಿಮಾತ್ಮನ ದೇವಸ್ಥಾನಕ್ಕೆ ಹೋಗಿದ್ದು. ಯುವಕನನ್ನು ಕಂಡ ಅರ್ಚಕರು ಆತನ ಮೇಲೆ ಸಂಶಯ ವ್ಯಕ್ತಪಡಿಸಿ ವಿಚಾರಿಸುತ್ತಿರುವಾಗ ಯುವಕನು ಗಾಬರಿಯಾಗಿದ್ದಾನೆ. ನಂತರ ಗ್ರಾಮಸ್ಥರ ಗುಂಪು ಯುವಕನ ಬಗ್ಗೆ ವಿಚಾರಿಸಿ, ಅವನ ಊರು ಆತನು ಪರಿಶಿಷ್ಟ ಜಾತಿಗೆ ಸೇರಿದವನೆಂದು ತಿಳಿದ ಮೇಲೆ ಹಲ್ಲೆ ನಡೆಸಿ ನೊಂದ ಯುವಕನ ಬಟ್ಟೆಯಲ್ಲಾ ಬಿಚ್ಚಿ ಕೈಗೆ ಹಗ್ಗದಿಂದ ಕಟ್ಟಿ ದೇವಸ್ಥಾನದಿಂದ ಗ್ರಾಮದ ರಸ್ತೆಗಳ ಮುಖಾಂತರ ಬೆತ್ತಲೆ ಮೇರವಣಿಗೆಯನ್ನು ಮಾಡಿದನ್ನು ನೋಡಿದರೆ, ಮಾನವ ಕುಲ ತಲೆ ತಗ್ಗಿಸುವಂತಾಗಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.

ದಲಿತ ಯುವಕ ಪ್ರತಾಪನ ಮೇಲೆ ಗುಂಪು ಹಲ್ಲೆ, ಜಾತಿ ನಿಂದನೆ, ಬೆತ್ತಲೆ ಮೇರವಣಿಗೆ ನಡೆದು ಒಂದು ವಾರವಾದರು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಗೊತ್ತಿದ್ದರು, ಗೊತ್ತಿಲ್ಲದಂತೆ ನಟನೆ ಮಾಡಿ ಮತ್ತು ಸ್ಥಳೀಯ ರಾಜಕೀಯ ವ್ಯಕ್ತಿಗಳ ಕೈಗೊಂಬ್ಬೆಯಂತೆ ಅಧಿಕಾರ ಚಲಾವಣೆ ಮಾಡುತ್ತಾ, ಕಾಲಹರಣ ಮಾಡುತ್ತಿರುವ ಜಿಲ್ಲಾಡಳಿತಕ್ಕೆ ನೇರ ಹೋಣೆಗಾರನ್ನಾಗಿ ಮಾಡಿ ಈ ಘಟನೆಗೆ ಸಂಬಂಧಪಟ್ಟ ವ್ಯಕ್ತಿಗಳು, ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು ದಲಿತ ಯುವಕನಿಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಒಂದು ವೇಳೆ ಸೂಕ್ತ ಕಾನೂನು ಕ್ರಮಕೈಗೊಳ್ಳದಿದ್ದ ಪಕ್ಷದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಅವರು ಎಚ್ಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here