ಕೆ.ಕೆ.ಆರ್.ಡಿ.ಬಿ 2 ಸಾವಿರ ಕೋಟಿ ಅನುದಾನದ ನಿರೀಕ್ಷೆಗೆ ಅಪ್ಪುಗೌಡರು ಪ್ರಯತ್ನಿಸಿಲ್ಲ: ನಾಲವಾರಕರ್ ಆಕ್ರೋಶ

2
68

ಕಲಬುರಗಿ: ದಕ್ಷಿಣ ಮತಕ್ಷೇತ್ರದ ಶಾಸಕ, ಕೆಕೆಅರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಅವರು ರಾಜ್ಯ ಆಯವ್ಯಯದಲ್ಲಿ ಕೆ.ಕೆ.ಆರ್.ಡಿ.ಬಿ ೨ ಸಾವಿರ ಕೋಟಿ ರೂಪಾಯಿಗಳ ಅನುದಾನವೇನೋ ನಿರೀಕ್ಷಿಸಿದ್ದು ಹೆಚ್. ಶಿವರಾಮೇಗೌಡರ ಕರವೇ ಸ್ವಾಗತಿಸುತ್ತದೆ. ಆದರೆ ಅಧ್ಯಕ್ಷರು ಪ್ರಯತ್ನಿಸಿದ್ದರೆ‌ ಅದು ಸಾಕಾರಗೊಳ್ಳುತ್ತಿತ್ತು. ಪ್ರಯತ್ನಿಸದೇ ಕೇವಲ ನಿರೀಕ್ಷಿಸಿದರೆ ಸಾಲದು ಎಂದು ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕ್ರೆಡೆಲ್ ಅಧ್ಯಕ್ಷರಾಗಿರುವ ಚಂದು ಪಾಟೀಲ್ ಅವರು ತಮ್ಮ ನಿಗಮಕ್ಕೆ ಹೊಸ ಯೋಜನೆ ನಿರೀಕ್ಷಿಸಿ ಅದಕ್ಕೆ ಪೂರಕವಾಗಿ ಪ್ರಯತ್ನಿಸಿ ಮುಖ್ಯಮಂತ್ರಿಗಳ ಮನವೊಲಿಸಿ ಬಜೆಟ್ ನಲ್ಲಿ ಘೋಷಣೆಯಾಗುವಂತೆ ಮಾಡಿರುವುದನ್ನು ಸ್ವಾಗತಿಸುವುತ್ತೇವೆ. ಕೆ.ಕೆ.ಆರ್.ಡಿ.ಬಿಗೆ ಇನ್ನೂ ೫೦೦ ಕೋಟಿ ಅನುದಾನ ಘೋಷಿಸಿ, ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here