ಗುರು ವ್ಯಕ್ತಿಯಲ್ಲ ಅದೊಂದು ತತ್ತ್ವ: ಜಯಶ್ರೀ ದಂಡೆ

2
24

ಕಲಬುರಗಿ: ನಮ್ಮ ಪೃಥ್ವಿ ಬಹಳ ವಿಶಾಲವಾದುದು.ಈ ಪೃಥ್ವಿಯ ಮೇಲೆ ಗುರುವೆನ್ನುವ ಬೀಜಅಂಕುರಗೊಂಡಿತು.ಈ ಗುರುವೆನ್ನುವ ಬೀಜದ ಮೇಲೆ ಮುಂದಿನ ಎಲ್ಲದರಉತ್ಪತ್ತಿಯಾಯಿತು. ಲಿಂಗವೆಂಬ ಎಲೆ, ಆ ಎಲೆಯ ಮೇಲೆ ವಿಚಾರವೆಂಬ ಹೂವು,ಆಚಾರವೆಂಬ ಕಾಯಿ, ನಿಷ್ಪತ್ತಿಯೆಂಬ ಹಣ್ಣು, ಆ ಹಣ್ಣತೊಟ್ಟು ಬಿಟ್ಟು ಕಳಚುವ ಮುಂಚೆಯೇಕೂಡಲ ಸಂಗಮ ದೇವತನಗೆ ಬೇಕೆಂದುಎತ್ತಿಕೊಂಡಎಂದು ಬಸವಣ್ಣನವರುತಮ್ಮ ವಚನವೊಂದರಲ್ಲಿ ಹೇಳುತ್ತಾರೆ.

ಬಸವ ಸಮಿತಿಯಅನುಭವ ಮಂಟಪದಲ್ಲಿ ಲಿಂ. ನೀಲಮ್ಮ ಮತ್ತು ಲಿಂ.ಶ್ರೀ ಶರಣಪ್ಪಕಲ್ಲಪ್ಪ ವಾಲಿ ಸ್ಮರಣಾರ್ಥಅರಿವಿನ ಮನೆ ೬೬೨ ನೆಯದತ್ತಿಕಾರ್ಯಕ್ರಮದಲ್ಲಿ ಗುರುತತ್ತ್ವ ಎಂಬ ವಿಷಯದ ಮೇಲೆ ಮಾತನಾಡಿದಉಪಾಧ್ಯಕ್ಷರಾದಡಾ. ಜಯಶ್ರೀ ದಂಡೆಯವರು ಚೆನ್ನಬಸವಣ್ಣನವರು ಪರಶಿವನನ್ನು ಶರಣರು ತಮ್ಮ ಅಂತರಂಗದಲ್ಲಿ ಕಂಡರು.

Contact Your\'s Advertisement; 9902492681

ಸಿಯುಕೆಯಲ್ಲಿ ’ವೆಲ್ತ್‌ಕ್ರಿಯೇ?ನ್??ಮೂಲಕ ಹಣಕಾಸು ಸಬಲೀಕರಣ’ ಬಗ್ಗೆ ವೆಬಿನಾರ್

ನಮ್ಮಲ್ಲಿ ಅಡಗಿರುವ ಸದ್ವಿಚಾರ, ಮಂಗಳಕರವಾದ ಯೋಚನೆಗಳು ಗುರು ಮತ್ತುಜಂಗಮರೂಪದಿಂದ ಭವದ ನರರನ್ನುಉದ್ಧಾರ ಮಾಡಲೆಂದು ಸಜಾತೀಯವಾದ ಮನುಜಾಕಾರವನ್ನು ತೊಟ್ಟು ಈ ಧರಗೆ ಬಂದಿದ್ದಾರೆಎನ್ನುತ್ತಾರೆ.ಅಂದರೆಅಂತರ್ಯಾಮಿಯಾಗಿ ನಮ್ಮಲ್ಲಿಅಡಗಿರುವ ಶಿವತತ್ತ್ವವೇ ಗುರುರೂಪವಾಗಿ ಪ್ರಕಟಗೊಳ್ಳುತ್ತದೆ. ವಿಜಾತೀಯವಾದಕಲ್ಲು, ಕಟ್ಟಿಗೆಮಣ್ಣು ನೀರು ಮುಂತಾದ ಜಡವಸ್ತುಗಳನ್ನು ದೈವವೆಂದು ನಂಬಿ, ಆರಾಧಿಸಿ ಗುಡ್ಡಬೆಟ್ಟಗಳಲ್ಲಿನ ನೀರನ್ನುತೀರ್ಥವೆಂದು ಭಾವಿಸಿ ಸೇವಿಸಿ ಭವ ಭಾರಿಗಳಾಗಿ ಹೋಗುವ ಜನರುತಮ್ಮ ಸಜಾತೀಯ ಅಂತರಂಗದ ಗುರುವನ್ನು ನಂಬಿ ಮತ್ತು ವಿಜಾತೀಯ ಅಂತರಂಗದ ಗುರು ಕಲ್ಲು, ಮಣ್ಣುಗಳ ಆರಾಧನೆ ಬಿಟ್ಟು ಜ್ಞಾನಿಗಳಾಗಿ ಗುರುವನ್ನುತಮ್ಮಅಂತರಂಗದಲ್ಲಿ ಕಂಡುಕೊಳ್ಳಬೇಕೆನ್ನುತ್ತಾರೆ. ಹಾಗೆಯೇ ಶಿವಯೋಗಿ ಸಿದ್ಧರಾಮೇಶ್ವರರು ಬಸವಾಕ್ಷರವೆಂಬ ಬೀಜಾಕ್ಷರವೇಗುರು ನಾಮಕ್ಕೆ ಮೂಲವಾಯಿತು.

ಈ ಅಕ್ಷರಾಂಕಯಾರಾದರೂಇದ್ದರೆಅದು ಕೇವಲ ಬಸವಣ್ಣ ನೊಬ್ಬನೇ.ಆ ಗುರುವಿನಿಂದಎಲ್ಲ ಅಕ್ಷರಗಳು ಹುಟ್ಟಿದವು.ಆ ಗುರುವಿನ ಕೈಯಲ್ಲಿ ಸತ್ತು ಹುಟ್ಟದೇ, ನಾವುಅದನ್ನುಚೈತನ್ಯಮಯವಾಗಿಕಾಣಲಿಕ್ಕೆ ಪ್ರಯತ್ನಿಸಬೇಕು.ಶಿವಾನುಭವವನ್ನು ಮಾಡಲಿಕ್ಕಾಗಿ.ಲೋಕದಜನ್ಮಾದಿ ಕಟ್ಟಳೆಯನ್ನು ಹರಿಯಲಿಕ್ಕೆ ಶಿವನೇ, ಅಂದರೆಅಂತರಂಗದ ಸುಜ್ಞಾನಚೈತನ್ಯವೇಗುರುವಾಗಿ ಬಂದನುಎಂದು ಶರಣ ಸಿದ್ಧರಾಮೇಶ್ವರರು ಅಭಿಪ್ರಾಯ ಪಡುತ್ತಾರೆ.

ಸಾಹಿತ್ಯ ಸಿಂಧು ಪ್ರಶಸ್ತಿ ಪ್ರದಾನ

ಗುರುತತ್ತ್ವವೆಂಬುದು ಸರಳವಾದುದು.ಏಕಮೂರ್ತಿಯಾದಂತಹಗುರುಲಿಂಗವೇಜಂಗಮವಾಗಿ, ಪರತರ ಪರಂಜ್ಯೋತಿಯಾದ ಮಹಾಲಿಂಗವೇ ಲೋಕದಅನುಗ್ರಹಕ್ಕಾಗಿಆಕಾಶದ ಮಳೆಯ ನೀರುಆಲಿಕಲ್ಲಾದಂತೆಕರಗಿದತುಪ್ಪವೇ ಹೆತ್ತುಪ್ಪವಾದಂತೆಗುರು-ಲಿಂಗ-ಜಂಗಮವಾಗಿ ಪರಿಣಮಿಸುತ್ತದೆಯೆಂದುಚೆನ್ನಬಸವಣ್ಣನವರು ಹೇಳುತ್ತಾರೆ.

ಕಾರ್ಯಕ್ರಮದಲ್ಲಿಡಾ.ಬಿ.ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ.ವೀರಣ್ಣದಂಡೆ, ದತ್ತಿ ದಾಸೋಹಿಗಳಾದಡಾ.ಕೆ.ಎಸ್.ವಾಲಿ ಉಪಸ್ಥಿತ್ತರಿದ್ದರು.ಶ್ರೀ ಹೆಚ್.ಕೆ.ಉದ್ದಂಡಯ್ಯ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here