ಮಾಜಿ ಶಾಸಕ ದಿ.ವಾಲ್ಮೀಕಿ ನಾಯಕರ ಆಸ್ತಿ ಪುಣ್ಯಕ್ಷೇತ್ರ ಕೃಷ್ಣ ನದಿಯಲ್ಲಿ ವಿಸರ್ಜನೆ

0
843

ಚಿತ್ತಾಪೂರ: ಮಾಜಿ ಶಾಸಕ ವಾಲ್ಮೀಕಿ ನಾಯಕರು ಕಳೆದ ವಾರ ವಿಧಿವಶರಾಗಿದ್ದರು,ಅವರ ಆಸ್ತಿಯನ್ನು ಕುಟುಂಬಸ್ತರು,ಅಭಿಮಾನಿಗಳು ಹಾಗೂ ಸುಮಾರು 200 ಜನ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ವಿಧಿವಿಧಾನಗಳ ಮೂಲಕ ಪೂಜೆ ನೆರೆವೆರಿಸಿ ಪುಣ್ಯಕ್ಷೇತ್ರವಾದ ಕೃಷ್ಣ ನದಿಯಲ್ಲಿ ಪುತ್ರರಾದ ವಿಠ್ಠಲ ನಾಯಕ ಹಾಗೂ ರವೀಂದ್ರ ನಾಯಕ ವಿಸರ್ಜನೆ ಮಾಡಿದ್ದರು ಎಂದು ವಾಲ್ಮೀಕಿ ನಾಯಕ ಕುಟುಂಬದ ಆಪ್ತರು ಹಾಗೂ ವಾಡಿಯ ಬಿಜೆಪಿ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹರಿ ಗಲಾಂಡೆ, ಶಂಕರ ರಾಠೋಡ,ವಿನೋದ ರಾಠೋಡ,ವಿಜಯ ಪವಾರ, ಬಲರಾಮ ರಾಠೋಡ, ವಿವೇಕ ನಾಯಕ ಮುಂತಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here