ಗೋಪಾಲ ಕೃಷ್ಣ ಚಿಟ್ಗುಪ್ಪಾಗೆ ಸನ್ಮಾನ

0
85

ಕಲಬುರಗಿ: ಮಹನಗರಕ್ಕೆ ಆಗಮಿಸಿದ ಬಿಜೆಪಿಯ ನೇಕಾರ ಪ್ರಕೋಷ್ಠದ ವಿಭಾಗೀಯ ಸಂಚಾಲಕರಾದ ಗೋಪಾಲ ಕೃಷ್ಣ ಚಿಟ್ಗುಪ್ಪಾ ಅವರನ್ನು ಜಿಲ್ಲಾ ಕುರವಿನಶೆಟ್ಟಿ ಸಮಾಜದ ಕಾರ್ಯಾಲಯ ದಲ್ಲಿ ಗೌರವಿಸಲಾಯಿತು.

ನಂತರ ಸಭೆಯಲ್ಲಿ ಮೊದಲಿಗೆ ಸಮಾಜದ ಕಾರ್ಯದರ್ಶಿ ಚಂದ್ರಶೇಖರ್ ಮ್ಯಾಳಗಿ ನೇಕಾರರ ಸಂಘಟನಾ ಸಭೆಗೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.

Contact Your\'s Advertisement; 9902492681

ಮಹಾನಗರ ನೇಕಾರ ಪ್ರಕೋಷ್ಟದ ನೂತನವಾಗಿ ಆಯ್ಕೆ ಗೊಂಡ ಹಿರಿಯ ನ್ಯಾಯವಾದಿಗಳಾದ ಶ್ರೀ. ಶಿವಲಿಂಗಪ್ಪಾ ಅಷ್ಟಗಿಯವರನ್ನು ಶಾಲುಹಾಕಿ ಮಾಲಾರ್ಪಣೆ ಮಾಡಿ ಅಣ್ಣಾರಾಯ ಕುಣಕೇರಿಯವರು ಸನ್ಮಾನಿಸಿ ಗೌರವಿಸಿದರು.

ಗೋಪಾಲ ಕೃಷ್ಣ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಸಪ್ತ ನೇಕಾರರು ಒಗ್ಗೂಡಿ ನಮ್ಮ ಸಂಘಟನಾ ಶಕ್ತಿಯನ್ನು ತ್ವರಿತವಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಮಾಹಿತಿಗಳ ಕೊರತೆಯನ್ನು ಹೋಗಲಾಡಿಸುವ ಮೂಲಕ ನಾವು ರಾಜ್ಯ ಸಂಚಾಲಕರಾದ ಡಾ. ಬಸವರಾಜ ಕಲೆಗಾರ ರನ್ನು ಸಂಪರ್ಕಿಸಿ ಎಂದು ಅವರ ಜಂಗಮ ವಾಣಿ ಸಂಖ್ಯೆ ಹೇಳಿದರು. ಮುಂದಿನ ದಿನಗಳಲ್ಲಿ ವಿಭಾಗೀಯ ನೇಕಾರರ ಮಹಾಸಭೆ ಸೇರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನಂತರ ಶಿವಲಿಂಗಪ್ಪಾ ಅಷ್ಟಗಿ ಸಭೆಯನ್ನುದ್ದೇಶಿಸಿ ಮಾತನಾಡಿ ರಾಜಿಕೀಯ ಬಲ ಹೊಂದದೆ ನಾವು ಏನು ಸಾಧಿಸಲು ಸಾಧ್ಯ ವಾಗುವದಿಲ್ಲ, ಕಾರಣ, ನಮ್ಮ 3 ವರ್ಷದ ಅವಧಿಯಲ್ಲಿ ಸಹ ಸಂಚಾಲಕರು ಹಾಗೂ ಬಿಜೆಪಿಯಲ್ಲಿ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನ್ಯಾಯವಾದಿ ಜೇನ ವೆರಿ ವಿನೋದ ಕುಮಾರ ರವರ ಮಾರ್ಗಸೂಚಿ ಅನ್ವಯ ನಾವು ನಮ್ಮ ನೇಕಾರ ಪ್ರಕೋಷ್ಟ ದ ಶಕ್ತಿ ಯನ್ನು ಹೆಚ್ಚಿಸೋಣ ರಂದು ಕರೆ ನೀಡಿದರು.

ಸಭೆಯಲ್ಲಿ  ಕುಶಾಲ್ ಯಡಹಳ್ಳಿ, ನ್ಯಾಯವಾದಿ ಸತೀಶ್ ಜಮಖಂಡಿ, ಮುನಹಳ್ಳಿ, ಈತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here