ಶಹಾಬಾದ: ಹೋಳಿ ಹಬ್ಬದ ನಿಮಿತ್ತ ಶನಿವಾರ ನಗರದ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಕ್ರೈಸ್ತ ಧರ್ಮಿಯರನ್ನು ಕರೆಯದೇ ಕಡೆಗಣಿಸಿದ್ದಾರೆ ಎಂದು ಕ್ರೈಸ್ತ ಬಿಲಿವರ್ಸ ಸಂಘದ ಕಾರ್ಯದರ್ಶಿ ಇಮ್ಯಾನುವೆಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೋಳಿ ಹಬ್ಬ, ಮುಂಬರುವ ಶಬ್ ಇ ಭಾರಾತ್ ಹಾಗೂ ಗುಡ್ ಪ್ರಾಯಿಡೆಯನ್ನು ಬಹಿರಂಗವಾಗಿ ಆಚರಣೆ ಮಾಡುವುದಕ್ಕೆ ತಾಲೂಡಳಿತದಿಂದ ನಿರ್ಬಂಧಿಸಲಾಗಿದೆ ಎಂದು ಹೇಳಲಾಗಿದೆ ಎಂದು ತಿಳಿದು ಬಂದಿದೆ.ಆದರೆ ಬಹುತೇಖ ಎಲ್ಲಾ ಸಮುದಾಯದ ಮುಖಂಡರನ್ನು ಕರೆದು, ಕ್ರೈಸ್ತ ಧರ್ಮಿಯರ ಪರವಾಗಿ ಒಬ್ಬರನ್ನು ಕರೆಯಲಾಗಿಲ್ಲ.ಇದಕ್ಕೆ ಕಾರಣವೇನು ಗೊತ್ತಿಲ್ಲ.ಗುಡ್ ಗುಡ್ ಪ್ರಾಯಿಡೆ ಬಗ್ಗೆ ಯಾರಿಗೆ ತಿಳಿಸಿದ್ದಾರೆ.
ಈ ಹಿಂದೆಯೂ ಶಾಂತಿ ಸಭೆಯಲ್ಲಿ ನಮ್ಮ ಸಮುದಾಯದವರನ್ನು ಕಡೆಗಣಿಸಿದ್ದಾರೆ. ಈ ಬಾರಿಯೂ ಅದೇ ರೀತಿ ಮುಂದುವರೆಸಿದ್ದಾರೆ.ಇದಕ್ಕೆ ನಮ್ಮ ಸಮುದಾಯಕ್ಕೆ ಬೇಸರ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.