ಏ.5 ರವರೆಗೆ ಕಾಲುವೆಗೆ ನೀರು ಹರಿಸಲು ಆರ್.ವಿ.ನಾಯಕ ಮನವಿ

0
58

ಸುರಪುರ: ರೈತರ ಬೆಳೆಗಳಿಗೆ ಏಪ್ರಿಲ್ 5ರ ವರೆಗೆ ನೀರಿನ ಅವಶ್ಯವಿದೆ,ಆದ್ದರಿಂದ ಈಗ ಹೊರಡಿಸಿರುವ ಆದೇಶವನ್ನು ಪರಿಶೀಲಿಸಿ ಏಪ್ರಿಲ್ 5ರ ವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಆಲಮಟ್ಟಿ ಹಾಗೂ ನಾರಾಯಣಪೂರ ಜಲಶಾಯಗಳಲ್ಲಿ ನೀರಿನ ಪ್ರಮಾಣ ಇನ್ನೂ ಹೆಚ್ಚಾಗಿ ಲಭ್ಯವಿರುವುದರಿಂದ, ಸದರಿ ನಾರಾಯಣಪೂರ ಜಲಾಶಯದಿಂದ ದಿನಾಂಕ: 31-03-2021ರವರೆಗೆ ಕಾಲುವೆಗಳಿಗೆ ನೀರು ಹರಿಸುವ ಸಲುವಾಗಿ ನಾನು ಈ ಹಿಂದೆ ಬರೆದ ಪತ್ರದಲ್ಲಿ ಒತ್ತಾಯಿಸಿದಂತೆ ತಾವುಗಳು ಕ್ರಮವಹಿಸಿರುವುದು ಸ್ವಾಗತಾರ್ಹವಾಗಿದೆ.

Contact Your\'s Advertisement; 9902492681

ಪ್ರಸ್ತುತ ನಾರಾಯಣಪುರ ಎಡದಂಡೆ ಕಾಲುವೆ ಕೂನೆಭಾಗದ ರೈತರ ಜಮೀನುಗಳಿಗೆ ನೀರು ತಲುಪದೆ ಹಿಂಗಹಾರು ಹಂಗಾಮಿನ ಬೆಳಗಳು ಕಟಾವಿಗೆ ಬಂದಿರುವುದಿಲ್ಲ. ಇದರಿಂದಾಗಿ ಕಾಲುವೆಯ ಕೂನೆ ಭಾಗದ ರೈತರು ತುಂಬಾ ಸಂಕಷ್ಟಕ್ಕೋಳಗಾಗುತ್ತಿದ್ದಾರೆ. ಕಾರಣ ರೈತರ ಹಿತದೃಷ್ಠಿಯಿಂದ ಕಾಲುವೆಗಳಿಗೆ ಏಪ್ರೀಲ್ 5ರ ರವರೆಗೆ ನೀರು ಹರಿಸಬೇಕು. ಇದರಿಂದಾಗಿ ರೈತರಿಗೆ ಹೆಚ್ಚಿನ ಅನೂಕೂಲ ಕಲ್ಪಿಸಿದಂತಾಗುತ್ತದೆ. ಸದರಿ ವಿಷಯದಲ್ಲಿ ಹಿಂದೆ ನಾನು ಪತ್ರದ ಮುಖಾಂತರ ತಮ್ಮಲ್ಲಿ ಕಾಲುವೆಗಳಿಗೆ ನೀರು ಹರಿಸುವ ಬಗ್ಗೆ ಕೋರಿರುತ್ತೇನೆ.

ಅದರಂತೆ ತಾವುಕೂಡಾ ಸ್ಪಂದಿಸಿ ರೈತರಿಗೆ ಅನುಕೂಲಕಲ್ಪಿಸಿದ್ದೀರಿ ಕೂನೆಭಾಗದ ರೈತರ ಜಮೀನುಗಳಿಗೆ ಇನ್ನು ನೀರಿನ ಅಭಾವ ಇರುವುದರಿಂದ ಅತೀ ಶೀಘ್ರವಾಗಿ ರೈತರ ಹಿತಕಾಯುವ ಕ್ರಮಕೈಗೊಂಡು ರೈತರಿಗೆ ಅನುಕೂಲಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here