ಕನ್ಯೆ ನೋಡಲು ಹೊರಟವರು ಮಸಣ ಸೇರಿದರು

1
187

ಹಾವೇರಿ: KSRTC ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸ್ಥಳದಲ್ಲಿ ಇಬ್ಬರು ಬೈಕ್ ಸವಾರರು ಸಾವನಪ್ಪಿರು ಘಟನೆ ಜಿಲ್ಲೆಯ ರಾಣೇಬೆನ್ನೂರು ಚೌಡಯ್ಯದಾನಪುರ ಕ್ರಾಸ್ ಬಳಿ ನಡೆದಿದೆ.

ಜಗದೀಶ ದೀಪಾಳಿ (28), ಹನುಮಂತ ದೀಪಾಳಿ (60), ಘಟನೆಯಲ್ಲಿ ಮೃತ ಪಟ್ಟ ದುರ್ದೈವಿಗಳು. ಮೃತರಿಬ್ಬರು ಹೊಸರಿತ್ತಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದ್ದು, ಚಿಕ್ಕಪ್ಪನ ಜೊತೆ ಮೃತ ಜಗದೀಶನಿಗೆ ಕನ್ಯೆ‌ ನೋಡಲು ರಾಣೇಬೆನ್ನೂರಿಗೆ ಹೋಗುವಾಗ ಎದುರಿಗೆ ಬಂದ್ ಬಸ್ ಸ್ಟೇರಿಂಗ್ ಕಟ್ ಆಗಿರುವ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Contact Your\'s Advertisement; 9902492681

ಸ್ಥಳಕ್ಕೆ ಪೋಲಿಸರ ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಕುರಿತು ರಾಣೇಬೆನ್ನೂರು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here