’ವೋಮಾವ್ಯೋಮ’ ಪ್ರಶಸಿ ಪ್ರದಾನ ಏ.6ಕ್ಕೆ

0
25

ಕಲಬುರಗಿ: ಬಂಡಾಯ ಸಾಹಿತಿ ಹೋರಾಟಗಾರ ಸಮಾಜ ಚಿಂತಕ ಡಾ. ಚನ್ನಣ್ಣ ವಾಲಿಕಾರ ಅವರ ಜನ್ಮದಿನೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ’ವೋಮಾವ್ಯೋಮ’ ಪ್ರಶಸ್ತಿ ನೀಡಿ ಸತ್ಕರಿಸಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಹಿರಿಯರು ಎ.ಕೆ. ರಾಮೇಶ್ವರರು ಆಯ್ಕೆ ಸಮಿತಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸಮಿತಿಯಲ್ಲಿ ಡಾ. ಕೆ.ಎಸ್. ಬಂಧು ಸಿದ್ದೇಶ್ವರ, ಸಿದ್ಧಮ್ಮ ವಾಲೀಕಾರ, ಬಸವರಾಜ ಸುಣಗಾರ, ಅಯ್ಯಣ್ಣ ವಾಲೀಕಾರ, ಅರವಿಂದಕುಮಾರ ವಾಲೀಕಾರ, ಮನೋಹರ ಮರಗುತ್ತಿ ಅವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಈ ಸಮಿತಿಯಲ್ಲಿ ಜನಪದ ತಜ್ಞರೆಂದು ಡಾ. ಸ್ವಾಮಿರಾವ ಕುಲಕರ್ಣಿ ಅವರನ್ನು ಡಾ. ಸರಸ್ವತಿ ಚಿಮ್ಮಲಗಿ ಅವರನ್ನು ಹೋರಾಟಗಾರ್ತಿ ಎಂದು ಡಾ. ಟಿ.ವಿ. ಶಿವಾನಂದ ಪತ್ರಕರ್ತರೆಂದು ಮತ್ತು ಡಾ. ಎಚ್.ಟಿ. ಪೋತೆ ಅವರನ್ನು ಸಮಗ್ರ ಸಾಹಿತ್ಯವನ್ನು ಪರಿಗಣಿಸಿ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು. ಅದರಂತೆ, ಜಾನಪದ ಗಾಯಕ ರೆಂದು ಶಂಭುಲಿಂಗ ವಾಲದೊಡ್ಡಿಯವರನ್ನು ರಾಜ್ಯಮಟ್ಟದ ’ವೋಮಾವ್ಯೋಮ’ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

ಈ ’ವೋಮಾವ್ಯೋಮ’ ಪ್ರಶಸ್ತಿಯನ್ನು ಡಾ. ಚನ್ನಣ್ಣ ವಾಲೀಕರ ಅವರ ಜನ್ಮದಿನೋತ್ಸದ ಅಂಗವಾಗಿ ಏಪ್ರಿಲ್ ೬ ರಂದು ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಮಕ್ಕಳ ಸಾಹಿತಿಗಳಾದ ಎ.ಕೆ. ರಾಮೇಶ್ವರ, ಸಿದ್ದಮ್ಮ ವಾಲೀಕಾರ, ಡಾ. ಕೆ.ಎಸ್.ಬಂಧು ಸಿದ್ದೇಶ್ವರ ಅವರು ಜಂಟಿಯಾಗಿ ಪ್ರತಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here