ಶಹಾಬಾದ: ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೇವ ಸುಬೇದಾರ ಗೆಲುವು

0
105

ಶಹಾಬಾದ: ನಗರಸಭೆಯ ವಾರ್ಡ ನಂ.೧೮ಕ್ಕೆ ತೆರವಾಗಿದ್ದ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಜಗದೇವ ಸುಬೇದಾರ ಅವರು ಗೆಲುವು ಸಾಧಿಸಿದ್ದಾರೆ ಎಂದು ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ತಹಸೀಲ್ದಾರ ಕಾರ್ಯಾಲಯ ಹೊರಗಡೆ ಸೇರಿದ್ದ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

ಬಿಜೆಪಿ ಅಭ್ಯರ್ಥಿ ಜಗದೇವ ಸುಬೇದಾರ ಕಾರ್ಯಾಲಯದಿಂದ ಹೊರಗಡೆ ಬಂದ ತಕ್ಷಣವೇ ಗುಲಾಲ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ವಾರ್ಡ ಸದಸ್ಯ ಜಗದೇವಗೆ ಹಾರ ಹಾಕಿ ಅಭಿನಂದಿಸಿದರು.

Contact Your\'s Advertisement; 9902492681

’ವೋಮಾವ್ಯೋಮ’ ಪ್ರಶಸಿ ಪ್ರದಾನ ಏ.6ಕ್ಕೆ

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ  ನಗರಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ನಿಶ್ಚಿತವಾಗಿತ್ತು.ವಾರ್ಡ ನಂ.೧೮ ಬಿಜೆಪಿ ಭದ್ರಕೋಟೆಯಾಗಿದ್ದು, ಕಳೆದ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಯೇ ಗೆಲುವು ಸಾಧಿಸಿದ್ದರು.ಅವರ ಅಕಾಲಿಕ ನಿಧನದಿಂದ ಚುನಾವಣೆ ನಡೆದಿದೆ.ಮತದಾರ ಪ್ರಭುಗಳಿಂದ ಈ ಗೆಲುವು ಸಾಧಿಸಿದ್ದೆವೆ. ಇದು ಬಿಜೆಪಿಯ ಗೆಲುವುಲ್ಲದೇ, ಮತದಾರರ ಗೆಲುವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಮುಖಂಡರಾದ ನರೇಂದ್ರ ವರ್ಮಾ,ನಾಗರಾಜ ಮೇಲಗಿರಿ, ಚಂದ್ರಕಾಂತ ಗೊಬ್ಬೂರಕರ್, ನಿಂಗಣ್ಣ ಹುಳಗೋಳಕರ್, ಸದಾನಂದ ಕುಂಬಾರ, ರವಿ ರಾಠೋಡ, ಸಿದ್ರಾಮ ಕುಸಾಳೆ, ದತ್ತಾ ಫಂಡ್, ವಿರೇಶಬಂದಳ್ಳಿ, ಮಹಾದೇವ ಗೊಬ್ಬೂರಕರ್, ಸಂಜಯ ಕೋರೆ, ಜ್ಯೋತಿ ಶರ್ಮಾ, ಜಯಶ್ರೀ ಸೂಡಿ,ಬಸವರಾಜ ಬಿರಾದಾರ,ಅರುಣ ಪಟ್ಟಣಕರ್,ದಿನೇಶ ಗೌಳಿ, ದತ್ತಾತ್ರೇಯ ಘಂಟಿ, ಅಣ್ಣಪ್ಪ ದಸ್ತಾಪೂರ,ಶ್ರೀಧರ ಜೋಷಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here