ಕಲಬುರಗಿ: ನಗರದ ಕನ್ನಡ ಭವನದಲ್ಲಿ ನಯಾ ಸವೇರಾ ಸಂಘಟನೆಯ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಮತ್ತು ಮೊಹ್ಮದ್ ಬಿಲಾಲ್ ಪಟೇಲ್ ಜನ್ಮದಿನದ ನಿಮಿತ್ತ ಒಂದು ದಿನದ ಐಪಿಎಸ್,ಐಎಎಸ್, ಕೆಎಎಸ್, ಕೆಇಎಸ್, ಪಿಎಸ್ಐ, ಎಫ್ಡಿಎ, ಎಸ್ಡಿಎ, ಪಿಡಿಒ, ಪಿಸಿ ತರಬೇತಿ ಕಾರ್ಯಕ್ರಮವನ್ನು ಶ್ರೀಶೈಲಂ ಸಾರಂಗಧರ ಮಠದ ಜಗದ್ಗುರು ಸಾರಂಗಧರ ಮಹಾಸ್ವಾಮೀಜಿ ಅವರು ಉದ್ಘಾಟಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಮೋದಿನ್ ಪಟೇಲ್ ಅಣಬಿ, ಎಚ್ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್, ಗ್ರಾಹಕರ ಹಕ್ಕುಗಳ ಸಂಸ್ಥೆ ರಾಜ್ಯಾಧ್ಯಕ್ಷೆ ಮಹೇಶ್ವರಿ ವಾಲಿ, ಡಿವಿಜನ್ ಎ ವಿಭಾಗದ ಎಸಿಪಿ ಅನುಶ ಕುಮಾರ, ಕೆಪಿಸಿಸಿ ವಕ್ತಾರರಾದ ಭವ್ಯ ನರಸಿಂಹಮೂರ್ತಿ, ಸರಿತಾ, ಫಕ್ರುದಿನ್ ಕೋತವಾಲ, ಎಂ.ಡಿ.ಅಲ್ಲಾವುದ್ದಿನ್ ಸಾಗರ, ಮೇಘಾ ಬಿರೆದಾರ, ಸೋಮನಾಥ ಡಿ, ಅಜಿಜುಲಾ ಸರಮಸ್ತ್, ಮೀರ ಮೊಹ್ಮದ್ ಅಲಿ, ನಿಜಾಮುದ್ದಿನ್ ಚಿಸ್ತಿ, ಮೊಜಾಮ ಬಾಂಬೆ ಮೆಡಿಕಲ್, ಸಲಿಂ ಅಹೆಮದ್ ಚಿತ್ತಾಪುರ, ಶೇಖ ಯುನೂಸ್ ಅಲಿ, ಮೊಹ್ಮದ್ ಖಾಲಿಕ ಹಾಗೂ ನಯಾ ಸವೇರಾ ಸಂಘಟನೆಯ ಪದಾಧಿಕಾರಿಗಳು ಇದ್ದರು.