ವಾಡಿ: ಪಟ್ಟಣದ ಪ್ರತಿಷ್ಠಿತ ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾಭಿವೃದ್ಧಿ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಣ್ಣ ಕಲಶೆಟ್ಟಿ, ಕಾರ್ಯದರ್ಶಿ ಶರಣಗೌಡ ಚಾಮನೂರ, ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ಹಿರಿಯ ಮುಖಂಡರಾದ ಶಂಕ್ರಯ್ಯಸ್ವಾಮಿ ಮದರಿ, ಪರುತಪ್ಪ ಕರದಳ್ಳಿ ಅವರ ಸಮ್ಮುಖದಲ್ಲಿ ರವಿವಾರ ನಡೆದ ವೀರಶೈವ ಲಿಂಗಾಯತ ಸಮಾಜದ ಸಭೆಯಲ್ಲಿ ಸರ್ವಾನುಮತದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ತೆಂಗಿನ ಬಾವಿಯಲ್ಲಿ ಈಜಲು ಹೋಗಿ ಯುವಕ ಸಾವು
ಸದಾಶಿವ ಕಟ್ಟಿಮನಿ (ಅಧ್ಯಕ್ಷ), ಭೀಮಶಾ ಜಿರೊಳ್ಳಿ (ಉಪಾಧ್ಯಕ್ಷ), ಅಣ್ಣಾರಾವ ಪಸಾರೆ (ಕಾರ್ಯದರ್ಶಿ), ಸಿದ್ದಲಿಂಗಯ್ಯಸ್ವಾಮಿ (ಸಹ ಕಾರ್ಯದರ್ಶಿ), ಬಸವರಾಜ ಕೀರಣಗಿ (ಖಜಾಂಚಿ), ಸಂಗಣ್ಣ ಇಚಿಡಿ (ಸಂಚಾಲಕ), ಅಶೋಕ ಹರನಾಳ, ಶಂಕ್ರಯ್ಯಸ್ವಾಮಿ ಮದರಿ, ಶಾಂತಪ್ಪ ಶೆಳ್ಳಗಿ, ಸಿದ್ರಾಮ ಮಲಘಾಣ, ಬಸಣ್ಣಗೌಡ ಯರಗಲ್, ಸಿದ್ದಣ್ಣ ಕಲಶೆಟ್ಟಿ, ಶಿವಶರಣ ಬಣಮಗಿ, ಶರಣಗೌಡ ಚಾಮನೂರ, ಶಿವಲಿಂಗಪ್ಪ ಬೀರನಳ್ಳಿ ಸದಸ್ಯರಾಗಿ ಆಯ್ಕೆಯಾದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.