ರೆಮ್ಡೆಸಿವಿಯರ್ ಇಂಜೆಕ್ಷನ್ ಕೊರತೆ: ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ: ಶಾಸಕ ಅಜಯ್ಸಿಂಗ್

0
10

ಕಲಬುರಗಿ: ರಾಜ್ಯದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಅಂಕಿ ಅಂಶಗಳು ಹೆಮ್ಮಾರಿ ಸೋಂಕು ಅಪಾಯದ ಮಟ್ಟ ಮೀರಿದ ಬಗ್ಗೆ ಒಂದೇ ಸವನೇ ಎಚ್ಚರಿಕೆ ಗಂಟೆ ಬಾರಿಸುತ್ತಿವೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸ್ಮಶಾನಗಳಲ್ಲಿ ಚಿತೆಗಳು ಅವಿರತ ಉರಿಯುತ್ತಿವೆ. ಆರೋಗ್ಯ ವ್ಯವಸ್ಥೆ ಕುಸಿಯುತ್ತಿದ್ದು ಬೆಡ್‍ಗಳು ಖಾಲಿ ಇಲ್ಲ ಎಂಬ ಫಲಕಗಳು ಆಸ್ಪತ್ರೆಗಳ ಮುಂದೆ ನೇತಾಡುತ್ತಿವೆ. ಕೊರೋನಾ ಮೊದಲ ಅಲೆಯಿಂದಲೇ ಪಾಠ ಕಲಿತು ಇಷ್ಟೊತ್ತಿಗಾಗಲೇ 2 ನೇ ಅಲೆಯ ಅವಾಂತರಗಳನ್ನು ಎದುರಿಸಲು ಸಿದ್ಧವಾಗಿರಬೇಕಿದ್ದ ರಾಜ್ಯ ಸರಕಾರ ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸಕ್ಕೆ ಮುಂದಾಗಿದೆ ಎಂದು ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ದೂರಿದ್ದಾರೆ.

ಕೊರೋನಾ ಹೆಮ್ಮಾರಿಯಿಂದಾಗಿ ಇಷ್ಟೆಲ್ಲಾ ರಾದ್ದಾಂತಗಳು ರಾಜ್ಯದಲ್ಲಿ ಸಂಭವಿಸುತ್ತಿದ್ದರೂ ಸಹ ಕೋವಿಡ್ 2 ನೇ ಅಲೆಯ ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ ಬರೀ ಹೇಳಿಕೆಗಳಲ್ಲೇ ಕಾಲಹರಣ ಮಾಡುತ್ತ ಕುಳಿತಿದೆ. ಕೊರೋನಾ ರೋಗಿಯ ಜೀವ ಉಳಿಸಲು ಅಗತ್ಯವಿರುವ ಔಷಧಿಗಳಲ್ಲಿ ಒಂದಾದ ರೆಮ್‍ಡೆಸಿವಿಯರ್ ಇಂಜೆಕ್ಷನ್ ಕೊರತೆ ಕಾಡುತ್ತಿದೆ, ಕಾಳಸಂತೆಯಲ್ಲಿ ಈ ಔಷಧಿ ಮಾರಾಟವಾಗುತ್ತಿದ್ದರೂ ಕೇಳೋರಿಲ್ಲದಂತಾಗಿದೆ ಎಂದು ಪತ್ರಿಕಿಕೆ ನೀಡಿ ವಿಷಾದಿಸಿದ್ದಾರೆ.

Contact Your\'s Advertisement; 9902492681

ಇನ್ನು ಕೋವಿಡ್ ವಿರುದ್ಧ ಹೋರಾಡಲು ಲಸಿಕಾಕರಣ ಆರಂಭವಾದರೂ ಕಳೆದ 5 ದಿನದಿಂದ ಕೋವಿಡ್ ಲಸಿಕೆಯ ಪೂರೈಕೆಯೇ ಇಲ್ಲದೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಲಸಿಕಾಕರಣಕ್ಕೆ ತೀವ್ರ ಹಿನ್ನೆಡೆ ಉಂಟಾಗಿದೆ. ಸೋಂಕು ಕಟ್ಟಿಹಾಕಲು ಸೂಕ್ತ ಪರೀಕ್ಷೆ, ಚಿಕಿತ್ಸೆ, ಮನೆ ಆರೈಕೆ, ಆಂಬ್ಯುಲೆನ್ಸ್ ಸೌಲಭ್ಯ ಮೊದಲಾದವುಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕಿದ್ದ ಸರ್ಕಾರ ಎಡವಿದೆ. ಲಸಿಕಾಕರಣದ ಪ್ರಗತಿಗೆ ಇದರಿಂದ ಭಾರಿ ಪೆಟ್ಟು ಬಿದ್ದಿದೆ. ಇದರತ್ತ ಗಮನ ನೀಡಬೇಕಾದ ಸರ್ಕಾರ ಯಾವುದಕ್ಕೂ ಸ್ಪಂದಿಸದೆ ಮೌನವಾಗಿದೆ ಎಂದು ವಿಷಾದಿಸಿದ್ದಾರೆ.

ರೆಮ್‍ಡೆಸಿವೀರ್ ಇಂಜೆಕ್ಷನ್ ಕಾಳಸಂತೆ ಮಾರಾಟ:  ಬೆಂಗಳೂರು ಸೇರಿದಂತೆ ರಾಜ್ಯದ 9 ನಗರಗಳಲ್ಲಿ ಕರೋನಾ 2 ನೇ ಅಲೆ ನಾಗಾಲೋಟದಲ್ಲಿದೆ. ನಿತ್ಯ ಸಾವಿರಾರು ಕೇಸ್ ವರದಿಯಾಗುತ್ತಿವೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ಸರ್ಕಾರ ವಹಿಸಬೇಕು. ಆದರೆ ಕೊರೆನಾೂೀಂಕಿತರ ಚಿಕಿತ್ಸೆಗೆ ಮೂಲದಲ್ಲೇ ಬೇಕಾಗುವ ರೆಮ್‍ಡೆಸಿವೀರ್ ಇಂಜೆಕ್ಷನ್ ಕೊರತೆ ಕಾಡುತ್ತಿದೆ. ಹೀಗಾಗಿ ಈ ಇಂಜೆಕ್ಷನ್ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ ಎಂದು ಶಾಸಕ ಅಜಯಸಿಂಗ್ ಆರೋಪಿಸಿದ್ದಾರೆ.

ರೆಮ್‍ಡೆಸಿವೀರ್ ಇಂಜೆಕ್ಷನ್ 1 ವಯಲ್ ಬೆಲೆ 1, 200 ರು. ಆದರೆ ದಲ್ಲಾಳಿಗಳು ಸೇರಿಕೊಂಡು ಕಾಳಸಂತೆಯಲ್ಲಿ ಈ ಜೀವ ಉಳಿಸುವ ಔಷಧಿಯ ಬೆಲೆ 12 ಸಾವಿರಕ್ಕೆ ತಂದಿಟ್ಟಿದ್ದಾರೆ. ಕಡು ಬಡವರು ಕೊರೋನಾದಿಂದ ಬಳಲುತ್ತಿದ್ದಾರೆ. ಇಂತಹವರು ದುಬಾರಿ ಬೆಲೆಗೆ ಇಂಜೆಕ್ಷನ್ ಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಇಂಜೆಕ್ಷನ್ ಸುತ್ತಮುತ್ತಲಿನ ದಲ್ಲಾಳಿಗಳ ಕಾಟ ತಪ್ಪಿಸಬೇಕು. ಕಾಳಸಂತೆ ತಪ್ಪಿಸಿ ಪಾರದರ್ಶಕವಾಗಿ ಎಲ್ಲರಿಗೂ ಈ ಇಂಜೆಕ್ಷನ್ ದೊರಕುವಂತೆ ಮಾಡಬೇಕು. ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ ಈ ವಿಚಾರದಲ್ಲಿ ಕಾರ್ಯತತ್ಪರವಾಗಬೇಕು. ಯುದ್ದೋಪಾದಿಯಲ್ಲಿ ಕಾಳಸಂತೆಕೋರರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. ನಿಜವಾದ ಬೆಲೆಗೇ ಇಂಜೆಕ್ಷನ್ ಜನತೆಗೆ ದೊರಕುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಿಟಿ ಸ್ಕಾನ್‍ನÀಲ್ಲಿ 10 ಕ್ಕೂ ಮೆಲ್ಪಟ್ಟು ರೀಡಿಂಗ್ ಬಂದವರಿಗೆ ಮಾತ್ರ ರೆಮ್‍ಡೆಸಿವೀರ್ ಇಂಜೆಕ್ಷನ್ ಕೊಡಬೇಕು ಎಂಬುದು ಕೊರೋನಾ ಚಿಕಿತ್ಸೆಯ ಪೆÇ್ರೀಟೋಕಾಲ್. ಆದರೆ ಅನೇಕ ಪ್ರಕರಣಗಳಲ್ಲಿ ಸಿಟಿ ಸ್ಕ್ಯಾನ್ ರೀಡಿಂಗ್ 10 ಕ್ಕಿಂತ ಕಮ್ಮಿ ಇದ್ದರೂ ಸಹ ರೆಮ್ ಡೆಸಿವೀರ್ ಇಂಜೆಕ್ಷನ್ ಕೊಡಲಾಗುತ್ತಿದೆ. ಇದರಿಂದಲೂ ಅದರ ಕೊರತೆ ಕಾಡುವಂತಾಗಿದೆ. ಸಂಬಂಧಪಟ್ಟವರು ಇಂತಹ ದುರ್ಬಳಕೆ ಮೇಲೆಯೂ ನಿಗಾ ಇಡಬೇಕು ಎಂದು ಆಗ್ರಹಿಸಿದ್ದಾರೆ.

ಸಹಾಯ ವಾಣಿ ಆರಂಭಿಸಿರಿ: ಕೊರೋನಾ ಸೋಂಕಿತರು, ಅವರ ಸಹಾಯಕರು ತಕ್ಷಣಕ್ಕೆ ಅಗತ್ಯ ಮಾಹಿತಿ ಪಡೆಯಲು ಟೋಲ್‍ಫ್ರೀ ಸಹಾಯವಾಣಿ ಆರಂಭಿಸಬೇಕು, ಆಸ್ಪತ್ರೆಗಳು, ಬೆಡ್ ಸಂಖ್ಯೆ, ಐಸಿಯೂ ಬೆಡ್, ವಾರ್ಡ್‍ಗಳು ಸೇರಿದಂತೆ ಕೊರೋನಾ ಚಿಕಿತ್ಸೆಯ ಎಲ್ಲಾ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಜನತೆಗೆ ಒದಗಿಸಬೇಕು. ಕೊರೋನಾ ಸಂಬಂಧಿತ ಎಲ್ಲ ವಿಚಾರಗಳು ಪಾರದರ್ಶಕವಾಗಿರಬೇಕು, ಎಲ್ಲವೂ ಜನರಿಗೆ ತಲುಪುವಂತೆ ಯೋಜಿತವಾಗಿ ರೂಪಿಸಬೇಕು. ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಬೇಕೆಂದು ಆಗ್ರಹಿಸಿರುವ ಡಾ. ಅಜಯ್ ಸಿಂಗ್ ಮಹಾರಾಷ್ಟದಿಂದ ಬರುತ್ತಿರುವ ವಲಸೆ ಕಾರ್ಮಿಕರ ಚಲನವಲನದ ಮೇಲೆ ನಿಗಾ ಇಡುವಂತೆ ಆಗ್ರಹಿಸಿದ್ದಾರೆ.

ಕಲಬುರಗಿ, ಬೀದರ್ ಸೇರಿದಂತೆ ಕಲ್ಯಾಣ ನಾಡಿನ ಜಿಲ್ಲೆಗಳಲ್ಲೂ ಕೊರೋನಾ ಆರ್ಭಟ ಜೋರಾಗಿದೆನ್ನೂ ಅರಿತು ಸರ್ಕಾಹರ ಈ ಭಾಗದಲ್ಲಿನ ಆಸ್ಪತ್ರೆ ವ್ಯವಸ್ಥೆಯನ್ನು ತುರ್ತು ಪರಿಸ್ತಿತಿ ಎದುರಿಸಲು ಯುದ್ದೋಪಾದಿಯಲ್ಲಿ ಅಣಿಗೊಳಿಸಬೇಕು. ಕೊರೋನಾ ಸೋಂಕು ಬಲಿ ಪಡೆಯುವ ವೇಗ ಹೆಚ್ಚುವ ಮೊದಲೇ ಅದನ್ನು ಸಮರ್ಥವಾಗಿ ಕಟ್ಟಿಹಾಕುವ ಕೆಲಸಕ್ಕೆ ಸರ್ಕಾರ ಇನ್ನಾದರೂ ಆದ್ಯತೆ ನೀಡಬೇಕಿದೆ ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here