ಜಿಲ್ಲಾ ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಿಗೆ ಉಡುಗೊರೆ

0
149

ಕಲಬುರಗಿ: ವಿಶ್ವ ಪುಸ್ತಕ ದಿನಾಚರಣೆ ನಿಮಿತ್ಯ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ರಾಜಕುಮಾರ್ ಕಡಗಂಚಿ ಅವರಿಗೆ ವಚನೋತ್ಸವ ಪ್ರತಿಷ್ಠಾನ ಯುವ ಘಟಕ ಅಧ್ಯಕ್ಷ ಹಾಗು ನ್ಯಾಯವಾದಿ ಶಿವರಾಜ ಅಂಡಗಿ ಅವರು ಪುಸ್ತಕಗಳು ಕಾಣಿಕೆಯಾಗಿ ನೀಡಿ ಸನ್ಮಾನಿಸಿದರು.

ದಿವಂಗತ ಫ.ಗು. ಹಳಕಟ್ಟಿ ಅವರು ನ್ಯಾಯವಾದಿಯಾಗಿ ವಚನ ಸಾಹಿತ್ಯ ಉಳಿಸಿ-ಬೆಳೆಸಿಕೊಂಡು ಬರದಿದ್ದರೆ ಇಂದಿನ ಪೀಳೆಗೆಗೆ ವಚನಗಳಾಗಲಿ, ವಚನ ಸಾಹಿತ್ಯವಾಗಲಿ ಪರಿಚಯವೇ ಇರುತ್ತಿರಲಿಲ್ಲ ಅದೇ ನಿಟ್ಟಿನಲ್ಲಿ ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಸೇವೆ ದೊರಕುವಂತಾಗಲಿ ಎಂದು ಅವರಿಗೆ ಹಾರೈಸಿದರು.

Contact Your\'s Advertisement; 9902492681

ನ್ಯಾಯವಾದಿ ವಿನೋದಕುಮಾರ ಜೇನೆವೆರಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here