ಯುವ ನ್ಯಾಯವಾದಿ ಹೋರಾಟಗಾರ ಕಾಮ್ರೇಡ್ ಮದುಸರ ಮೌಲಾಮುಲ್ಲಾ ಇನ್ನಿಲ್ಲ

0
425

ಆಳಂದ: ತಾಲ್ಲೂಕಿನ ತಡೋಳ ಗ್ರಾಮದ ಯುವ ನ್ಯಾಯವಾದಿ, ಹಾಗೂ ಅಖಿಲ ಭಾರತ ಯುವಜನ ಒಕ್ಕೂಟ ಹೋರಾಟ AIYF ರಾಜ್ಯ ಮಂಡಳಿಯ ಸದಸ್ಯರು, ಹಾಗೂ ಆಳಂದ ತಾಲ್ಲೂಕಿನ ಅಧ್ಯಕ್ಷರು, ಎಐಟಿಯುಸಿ ಕಾರ್ಮಿಕ ಸಂಘಟನೆಯ ತಾಲೂಕು ಅಧ್ಯಕ್ಷರಾದ, ಯುವ ನ್ಯಾಯವಾದಿ ಕಾಮ್ರೇಡ್ ಮದುಸರ್ ಮೌಲಾ ಮುಲ್ಲಾ (34) ಅವರು 29/04/2021 ರ೦ದು ಶುಕ್ರವಾರ ಬೆಳಿಗ್ಗೆ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನ್ಯುಮೋನಿಯಾ ರೋಗದಿಂದ ಕೇವಲ ಎರಡು ದಿನಗಳಲ್ಲೆ ಸಾವನ್ನಪ್ಪಿದ್ದಾರೆ.

ಕಾಮ್ರೇಡ್ ಮೌಲಾ ಮುಲ್ಲಾ ರವರ ಎಡ ಪಕ್ಷವಾದ ಸಿಪಿಐ ಪಕ್ಷದ ಸಿದ್ಧಾಂತವನ್ನು ನಂಬಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಹೋರಾಟ ಚಳವಳಿ ಪ್ರಾರಂಭಿಸಿದವರು. ಆಳಂದ ನಗರದ ನ್ಯಾಯಾಲಯದಲ್ಲಿ ತಮ್ಮ ವಕೀಲ ವೃತ್ತಿಯನ್ನು ಪ್ರಾರಂಭಿಸಿ ತಮ್ಮ ವೃತ್ತಿಯೊಂದಿಗೆ ವಿದ್ಯಾರ್ಥಿ, ಯುವಕರ, ರೈತ- ಕಾರ್ಮಿಕರ ಹೋರಾಟದಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿ ಅನೇಕ ಹೋರಾಟಗಳು ಯಶಸ್ವಿ ಗೊಳಿಸಿದ್ದಾರೆ.

Contact Your\'s Advertisement; 9902492681

ಇಂಥ ಹೋರಾಟಗಾರರನ್ನು ಕಳೆದುಕೊಂಡಿರುವುದು ನಮ್ಮ ಭಾಗಕ್ಕೆ ವಿಶೇಷವಾಗಿ ಯುವ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.ಅವರ ಅಗಲಿಕೆಗೆ ಎಐಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎಚ್. ಎಸ್. ಪದಕಿ, ಕಾರ್ಯದರ್ಶಿಯಾದ ಪ್ರಭುದೇವ ಯಳಸಂಗಿ, ಎಐವೈಎಫ್ ಜಿಲ್ಲಾ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ.ಅಟ್ಟೂರ, ಹೋರಾಟಗಾರ ಮಹೇಶಕೂಮಾರ ರಾಠೋಡ, ಕೆಎಸ್ಆರ್ ಟಿಸಿ ಫೆಡರೇಷನ್ ರಾಜ್ಯ ಉಪಾಧ್ಯಕ್ಷರಾದ ಸಿದ್ದಪ್ಪ ಪಾಲ್ಕಿ, ಹಿರಿಯ ವಕೀಲರಾದ ಪಿ. ವಿಲಾಸ್ ಕುಮಾರ, ಡಾ॥ ಪಿ. ಸಂಪತರಾವ,ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭಿಮಾಶ೦ಕರ ಮಾಡ್ಯಾಳ, ಆಳಂದ ತಾಲ್ಲೂಕಾ ಎಐಟಿಯುಸಿ ಕಾರ್ಯದರ್ಶಿ ದತ್ತಾತ್ರೇಯ ಕಬಾಡೆ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕಲ್ಯಾಣಿ ತುಕ್ಕಾಣಿ, ಮಹಿಳಾ ಹೋರಾಟಗಾರರಾದ ಪದ್ಮಾವತಿ ಮಾಲಿ ಪಾಟೀಲ, ಹಾಗೂ ಎಐಎಸ್‌ಎಫ ವಿದ್ಯಾರ್ಥಿ ಮುಖ೦ಡರು,ಎಐಕೆ ಎಸ ರೈತ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here