ಕಾರ್ಮಿಕರ ನೇಮಕಾತಿಯಲ್ಲಿ ಅಕ್ರಮ: ನಿಜವಾದ ಪೌರ ಕಾರ್ಮಿಕರಿಗೆ ನೇಮಕಾತಿ ಒತ್ತಾಯಿಸಿ ಪ್ರತಿಭಟನೆ

0
25

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ (ವಿಶೇ?)ನೇಮಕಾತಿಯಲ್ಲಿ ಆಗಿರುವ ಆಕ್ರಮ ನೇಮಕಾತಿ ರದ್ದು ಮಾಡುವ ಕುರಿತು ಹಾಗು ನಿಜವಾದ ಪೌರ ಕಾರ್ಮಿಕರಿಗೆ ನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಿ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ.ಪ್ರಸಾದ್ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ ಇವರುಗಳಿಗೆ ಮನವಿ ಸಲ್ಲಿಸಲಾಯಿತು.

ಕಳೆದ ತಿಂಗಳು ಕಲ್ಬುರ್ಗಿ ಮಹಾನಗರ ಪಾಲಿಕೆಯಲ್ಲಿ ಹಲವು ವ?ಗಳಿಂದ ನೆನೆಗುದಿಗೆ ಬಿದ್ದಿರುವ ಪೌರ ಕಾರ್ಮಿಕರ (ವಿಶೇಷ) ನೇರ ನೇಮಕಾತಿಯನು ಈ ವರ್ಷ ಪೂರ್ಣಗೊಳಿಸಲು ಪ್ರಯತ್ನಿಸುವುದು ಪೌರ ಕಾರ್ಮಿಕರಿಗೆ ಹ?ದ ವಿಷಯವಾಗಿದೆ.ಆದರೆ ಈಗ ಪ್ರಕಟಿಸಿರುವ ತತ್ಕಾಲೀಕ ಪಟ್ಟಿ ಆಕ್ರಮದಿಂದ ಕೂಡಿದ್ದು, ೧೫_೨೦ ವ?ಗಳಿಂದ ದುಡಿದ ನಿಜವಾದ ಪೌರ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಅಬಕಾರಿ ದಾಳಿ: 1.5 ಲಕ್ಷ ಮೌಲ್ಯದ ಸ್ವದೇಶಿ ಮದ್ಯ ಜಪ್ತಿ

ಮಹಾನಗರ ಪಾಲಿಕೆ ಕಲ್ಬುರ್ಗಿ ಪೌರ ಕಾರ್ಮಿಕರ (ವಿಶೇ?)ನೇಮಕಾತಿಯ ಲ್ಲಿ ೪೦ ರಿಂದ ೫೦ ಜನ ಸುಪರೇವೈಜರಗಳನ್ನು ಹಾಗೂ ೧೦_೧೫ ಜನ ವಾಹನ ಚಾಲಕರುನು ಮತ್ತು ೫ ರಿಂದ ೧೦ ಜನ ಕಛೇರಿ ಕೆಲಸದವರನು ನೇಮಕ ಮಾಡಿಕೊಂಡಿರುತ್ತಾರೆ. ಹಾಗು ೨._೩ ವ? ಸೇವೆಸಲ್ಲಿಸಿದವರನ್ನು ನೇಮಕ ಮಾಡಿಕೊಂಡಿದ್ದು, ಆದರೆ ಇವರುಗಳು ದಾಖಲೆಯಲ್ಲಿ ಪಿ.ಕೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ನೇಮಕಾತಿ ಪ್ರಾಧಿಕಾರಕ್ಕೆ ದಾರಿ ತಪ್ಪಿಸಿರುತಾರೆ.ಮತ್ತು ಇದರಿಂದ ೧೫_೨೦ ವ? ದುಡಿದ ಪೌರ ಕಾರ್ಮಿಕರಿಗೆ ಅನ್ಯಾಯವಾಗಿದೆ. ಈ ನೇಮಕಾತಿಯಲ್ಲಿ ಹೊರಗುತ್ತಿಗೆ ನೌಕರರನ್ನು ಮಾತ್ರ ನೇಮಕಾತಿಯಲ್ಲಿ ಪರಿಗಣನೆಗೆ ತೆಗೆದುಕೊಂಡು ದಿನಗೂಲಿ ನೌಕರರನ್ನು ಕಡೆಗಣಿಸಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಜೇಮ್ಸ್ ಆಸ್ಪತ್ರೆಯಲ್ಲಿ ಬೇಡ್ ಸಿಗದೆ ಮಹಿಳೆ ಸಾವು

ಈ ವಿ?ಯವಾಗಿ ಪೌರ ಕಾರ್ಮಿಕರ ಹಲವು ಬಾರಿ ಹೋರಾಟ, ಪ್ರತಿಭಟನೆಗಳು ನಡೆಸಿದಾಗ ಜಿಲ್ಲಾ ಉಸ್ತುವಾರಿ,ಜಿಲ್ಲಾಧಿಕಾರಿಗಳು, ಹಾಗು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡದು ಇವರಿಗೆ ನೇರಪಾವತಿ. ಸಮಾನ ಕಲಸಕೇ ಸಮಾನ ವೇತನ ಜಾರಿ ಮಾಡುಲು ತೀರ್ಮಾನ ಕೈಗೊಳ್ಳುಲಾಗಿದೆ. ಮತ್ತು ಕಲ್ಬುರ್ಗಿ ಮಾನ್ಯ ಜಿಲ್ಲಾ ನ್ಯಾಯಾಲಯದಲ್ಲಿ ಇವರ ಪರವಾಗಿ ತೀಪು ನೀಡಿ ೩೭೦ ಜನ ದಿನಗೂಲಿ ಪೌರ ಕಾರ್ಮಿಕರು ಎಂದು ಆದೇಶಿಸಿ ನೇರ ಪಾವತಿಗೆ ಆದೇಶ ನೀಡಿರುತಾರೆ. ಮತ್ತು ಕಾರ್ಮಿಕರ ಖಾತೆಗೆ ನೇರ ಪಾವತಿಗೆ ಕ್ರಮ ಕೈಗೊಂಡಿರುತ್ತಾರೆ ಇನ್ನು ೫೪ ತಿಂಗಳ ವೇತನ ಮಾಡದಿರುವ ಬಗ್ಗೆ ಸಹಾಯಕ ಕಾರ್ಮಿಕರು ಕಾರ್ಮಿಕ ಇಲಾಖೆಯ ಕಾರ್ಮಿಕ ನ್ಯಾಯಲಯದಲ್ಲಿ ಪ್ರಕರಣ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದರು.

ಈಗ ತಯಾರಿಸಿರುವ ನೇರ ನೇಮಕಾತಿ ಪಟ್ಟಿಯು ಪ್ರಾಧಿಕಾರಕ್ಕೆ ಸಂಪೂರ್ಣ ಮಾಹಿತಿ ಸ್ಥಳೀಯ ಅಧಿಕಾರಿಗಳು ನೀಡದೆ ತಮಗೆ ಅನುಕೂಲವಿರುವ ಪಟ್ಟಿಯನ್ನು ತಯಾರು ಮಾಡಿ ಪ್ರಾಧಿಕಾರಕ್ಕೆ ಸಲ್ಲಿಸಿರುತ್ತಾರೆ ಆದರಿಂದ ನಿಜವಾದ ಪೌರ ಕಾರ್ಮಿಕರ ಸಂಪೂರ್ಣ ವಾಸ್ತವ ದಾಖಲೆಗಕನ್ನು ಮರೆಮಾಚಿರುತ್ತಾರೆ ಮತ್ತು ಪ್ರಾಧಿಕಾರವು ಕೇಲವು ಭ್ರ? ಅಧಿಕಾರಿಗಳ ಅನುಕೂಲಕ್ಕೆ ತಕ್ಕಂತೆ ನಿಯಮಾವಳಿ ರೂಪಿಸಿಕೊಂಡು ೧೦ -೧೫ ವ? ದುಡಿದಿರುವ ನಿಜವಾದ ಪೌರ ಕಾರ್ಮಿಕರಿಗೆ ಅನ್ಯಾಯವಾಗಿದೆ ಕೂಡಲೇ ತಾವು ಮಧ್ಯಸ್ಥಿಕೆ ವಹಿಸಿ ಈ ನೇಮಕಾತಿ ತಡೆ ನೀಡಿ ನಿಜವಾದ ಪೌರ ಕಾರ್ಮಿಕರಿಗೆ ನ್ಯಾಯ ಒಡಗಿಸಬೇಕೆಂದು ಆಗ್ರಹಿಸಿದರು.

ಕಲಬುರಗಿಯಲ್ಲಿ ಆಕ್ಸಿಜನ್ ಕೊರತೆ ಇದ್ದರೂ ಬೇರೆ ರಾಜ್ಯಕ್ಕೆ ಪೂರೈಕೆ!?

ಈ ಸಂದರ್ಭದಲ್ಲಿ ಮುಖಂಡರಾದ ಸೂರ್ಯಕಾಂತ ನಿಂಬಾಲಕರ್ ,ಸುನೀಲ ಮಾರುತಿ ಮಾನ್ಪಡೆ, ವಿಠಲ ಚಿಕಣಿ ,ಮೈಲಾರಿ ದೊಡ್ಡಮನಿ, ಅಯ್ಯಣ ಹಾಲಬಾವಿ, ನಾಗಪ್ಪ ಟೈಗರು, ರುಕ್ಕಪ ಕಾಂಬಳೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here