ಕಲಬುರಗಿ: ಕೊರೊನಾ ಸೊಂಕು ಎಲ್ಲರನ್ನೂ ತಲ್ಲಣಗೊಳಿಸಿದೆ ಮೊದಲನೇ ಅಲೆ ವೃದ್ಧರನ್ನು ಕಾಡಿತ್ತು , ಎರಡನೇ ಅಲೆಯಲ್ಲಿ ವಯಸ್ಸಿನ ಅಂತರವಿಲ್ಲದೆ ಸಾವು ನೋವುಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಅಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಂದಕುಮಾರ ನಾಗಭುಜಂಗೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.
ಈ ಕುರಿತು ಸರಕಾರಕ್ಕೆ ಮನವಿ ಮಾಡಿರುವ ಅವರು, ಸರ್ಕಾರದ ಉಢಾಪೆ, ಸಿದ್ದತೆ ಇಲ್ಲದೇ ನಿರ್ಲಕ್ಷ್ಯ , ಸಾರ್ವಜನಿಕರ ಬೇಜವಬ್ದಾರಿತನ ಕೂಡಾ ಎಂದು ಹೇಳುತ್ತೇವೆ. ತಜ್ಞರು ಮುನ್ಸೂಚನೆ ನೀಡಿದರೂ ಜನರು ಹಾಗೂ ಸರಕಾರ ನಿರ್ಲಕ್ಷ್ಯ ತಾಳಿದ್ದಾರೆ.
ಜೂನ್ ನಂತರ ಮೂರನೇಯ ಅಲೆಯ ಆರ್ಭಟ ಇದೆಯಂದೂ ಅದು ಮಕ್ಕಳನ್ನು ಕಾಡಬಹದು ಎಂದು ತಜ್ಞರು ಮುನ್ಸೂಚನೆ ಕೊಟ್ಟಿದರೂ ಸಹ ಸರಕಾರ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಕೂಡಲೇ ವೈದ್ಯರು ಈ ಕುರಿತು ಜನರಿಗೆ ಸೂಕ್ತ ಜಾಗೃತಿ ಮೂಡಿಸಬೇಕು. ಈ ಸಮಯದಲ್ಲಿ ಮಕ್ಕಳ ಆರೋಗ್ಯಕರ , ಆಹಾರ , ಜೀವನಶೈಲಿ ಬಗ್ಗೆ ತಿಳಿ ಹೇಳಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು.