ಸಾರ್ವಜನಿಕರ ಸೇವೆಗೆ ವೆಲ್‌ನೆಸ್ ಸೆಂಟರ್ ಸಿದ್ಧ

0
75

ಕಲಬುರಗಿ: ಕಲಬುರಗಿ ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಹೈ.ಕ. ಮಂಡಳಿಯ ೧೯.೫ ಲಕ್ಷ ರೂ. ಅನುದಾನದಲ್ಲಿ ಸ್ಥಾಪಿಸಲಾಗಿರುವ ವೆಲ್‌ನೆಸ್ ಸೆಂಟರ್ ಸಾರ್ವಜನಿಕ ಸೇವಗೆ ಸಿದ್ಧಗೊಂಡಿದ್ದು, ಶೀಘ್ರವೆ ಜನಪ್ರತಿನಿಧಿಗಳಿಂದ ಉದ್ಘಾಟನೆ ಮಾಡಿ ಸಾರ್ವಜನಿಕರ ಬಳಕೆಗೆ ನೀಡಲಾಗುವುದು ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ತಿಳಿಸಿದರು.

ಬುಧವಾರ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಿನನಿತ್ಯ ಕ್ರೀಡಾಂಗಣಕ್ಕೆ ಬರುವ ಸಾರ್ವಜನಿಕರ ಮತ್ತು ಕ್ರೀಡಾಳುಗಳ ಆರೋಗ್ಯದ ಹಿತದೃಷ್ಠಿಯಿಂದ ಮತ್ತು ಉತ್ತಮ ಆರೋಗ್ಯಕ್ಕೆ ಪೂರಕವಾಗಿರುವ ವೆಲ್‌ನೆಸ್ ಸೆಂಟರ್ ಇಲ್ಲಿ ಸ್ಥಾಪಿಸಲಾಗಿದೆ. ಜಾಕುಜಿ ಸ್ಪಾ ಮತ್ತು ಸ್ಟೀಂ ಸೌನಾ  ( jacuzzi spa & steam sauna) ಇದು ಒಳಗೊಂಡಿರುತ್ತದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಉಪಯೋಗಿಸಲು ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಪ್ರತಿ ಗಂಟೆಗೆ ೧೦೦ ರೂ. ಗಳಂತೆ ಪಾವತಿಸಿ ಬಳಸಲು ಅವಕಾಶ ನೀಡಲಾಗುತ್ತದೆ. ಇದಲ್ಲದೆ ಮಾಸಿಕ ೧೨೦೦ ರೂ. ಮತ್ತು ವಾರ್ಷಿಕ ೧೨೦೦೦ ರೂ. ಒಮ್ಮೆಲೆ ಪಾವತಿಸಿ ಬಳಸಬಹುದಾಗಿದೆ ಎಂದರು.

Contact Your\'s Advertisement; 9902492681

೧೬ ವಯಸ್ಸಿನ ಒಳಗಿನ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಕ್ರೀಡಾಪಟುಗಳು ಮತ್ತು ಹಿರಿಯ ನಾಗರಿಕರಿಗೆ ಶುಲ್ಕದಲ್ಲಿ ಶೇ.೫೦ರಷ್ಟು ರಿಯಾಯಿತಿ ನೀಡಲಾಗುವುದು. ಆರಂಭದಲ್ಲಿ ೫೦ ರೂ. ಪ್ರತ್ಯೇಕವಾಗಿ ಪಾವತಿಸಿ ವೆಲ್‌ನೆಸ್ ಸೆಂಟರ್ ಪ್ರವೇಶಕ್ಕೆ ಗುರುತಿನ ಚೀಟಿ ಪಡೆಯುವುದು ಕಡ್ಡಾಯ ಎಂದರು.

ಕ್ರೀಡಾಂಗಣದಲ್ಲಿ ಸ್ಕೇಟಿಂಗ್ ರಿಂಕ್, ಖೋ-ಖೋ, ಕಬ್ಬಡಿ ಮೈದಾನದ ಅಭಿವೃದ್ಧಿಗೆ ಹೈ.ಕ.ಮಂಡಳಿಯಿಂದ ೧.೩೮ ಕೋಟಿ ರೂ. ಅನುದಾನ ನೀಡಲಾಗಿದ್ದು, ಶೀಘ್ರದಲ್ಲಿಯೆ ಕಾಮಗಾರಿ ಶುರುವಾಗಲಿದೆ. ಇದಲ್ಲದೆ ಬಾಕ್ಸಿಂಗ್, ಜುಡೋ ಮತ್ತು ರೆಸ್ಟ್‌ಲಿಂಗ್ ಕ್ರೀಡಾ ಪಟುಗಳ ಅಭ್ಯಾಸಕ್ಕಾಗಿ ೬೨ ಲಕ್ಷ ರೂ. ವೆಚ್ಚದಲ್ಲಿ ಜುಡೊ ಹಾಲ್ ಕೂಡ ನಿರ್ಮಿಸಲಾಗುತ್ತಿದ್ದು, ಅದರ ಕಾಮಗಾರಿಯೂ ಶೀಘ್ರದಲ್ಲಿಯೆ ಪ್ರಾರಂಭಗೊಳ್ಳಲಿದೆ ಎಂದರು.
ಒಟ್ಟಾರೆ ಚಂಪಾ ಕ್ರಿಡಾಂಗಣದಲ್ಲಿ ಸಾರ್ವಜನಿಕರು ಮ್ತತು ಕ್ರೀಡಾಪಟುಗಳಿಗೆ ಅನುಕೂಲವಾಗಲೆಂದು ಮತ್ತು ಕ್ರೀಡಾ ಸ್ನೇಹಿ ವಾತಾವರಣ ನಿರ್ಮಿಸಲು ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಹೈ.ಕ.ಮಂಡಳಿ ಹೆಚ್ಚಿನ ಒತ್ತು ನೀಡಿದೆ ಎಂದು ಪ್ರಾದೇಶಿಕ ಆಯುಕ್ತರು ಕ್ರೀಡಾಪಟುಗಳಿಗೆ ತರಬೇತಿ ನೀಡಲು ಕ್ರೀಡಾ ತರಬೇತುದಾರರ ನೇಮಕಾತಿಗೂ ಚಾಲನೆ ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಹೈ.ಕ.ಮಂಡಳಿ ಸೇರಿದಂತೆ ವಿವಿಧ ಅನುದಾನದಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ರಾಜಾ ಪಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿಂದ್ರ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಭೀಮರಾವ ಬಿರಾದರ, ಕೆ.ಆರ್.ಐ.ಡಿ.ಎಲ್. ಇಂಜಿನೀಯರ್ ಸುಭಾಷ, ಪಿ.ಆರ್.ಇ.ಡಿ. ಇಂಜಿನೀಯರ್ ಚಂದ್ರಶೇಖರ ಮೋತಕಪಲ್ಲಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here