ರಂಗಕರ್ಮಿ ಶೋಭಾ ರಂಜೋಳಕರ್ ನಿಧನಕ್ಕೆ: ಅಷ್ಠಗಿ ಕಂಬನಿ

0
33

ಕಲಬುರಗಿ: ಜನಪರ ಕಾಳಜಿ,ಸಾಮಾಜಿಕ ಧೋರಣೆಯ ಸಂಘಟಕಿ ,ಆಕಾಶವಾಣಿ ಕಲಾವಿದೆ,ರಂಗಭೂಮಿ,ಚಲನಚಿತ್ರ ನಟಿ,ಪರೋಪಕಾರಿ ಗುಣದ ,ದಿಟ್ಟ ಮಹಿಳೆ, ಶ್ರೀಮತಿ ಶೋಭಾ ರಂಜೋಳಕರ್ ಅವರ ನಿಧನಕ್ಕೆ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಕಂಬನಿ ಮಿಡಿದಿದ್ದಾರೆ.

ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದೆ ಖ್ಯಾತರಾಗಿದ್ದ ಶೋಭಾ ರಂಜೋಳಕರ್ ರವರು ನಾನು ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನನ್ನನ್ನು ಕಾರ್ಯಕ್ರಮಗಳ ಉದ್ಘಾಟನೆಗೆ ಆವ್ಹಾನಿಸಿ ಅತ್ಯಂತ ಸರಳತೆಯನ್ನು ಮೆರೆದಿದ್ದರು.

Contact Your\'s Advertisement; 9902492681

ಅವರ ನಿಧನ ಅತ್ಯಂತ ದುಃಖದ ಸಂಗತಿ.ಅವರ ನಿಧನದಿಂದಾಗಿ ಈ ಭಾಗದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಭಗವಂತ ದಯಪಾಲಿಸಲಿ ಹಾಗೂ ಅವರ ಕುಟುಂಬದವರಿಗೆ ಮತ್ತು ಅವರ ಅಸಂಖ್ಯಾತ ಅಭಿಮಾನಿ ಬಳಗಕ್ಕೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಅಂಬಾರಾಯ ಅಷ್ಠಗಿ ಪ್ರಾರ್ಥಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here