ದೇವೇಗೌಡರ ಜನ್ಮದಿನದ ಪ್ರಯುಕ್ತ ಆಹಾರ ಹಣ್ಣು ಹಂಪಲು ವಿತರಣೆ

0
33

ಸೇಡಂ : ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹಾಗೂ ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ ಅವರ 89ನೇ ಹುಟ್ಟು ಹಬ್ಬದ ಅಂಗವಾಗಿ ಜೆಡಿಎಸ್ ಪಕ್ಷದ ಮುಖಂಡರಾದ ಬಾಲರಾಜ್ ಗುತ್ತೇದಾರ್ ಅವರ ವತಿಯಿಂದ ಸೇಡಂ ತಾಲೂಕಿನ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿರುವ ರೋಗಿಗಳಿಗೆ ಹಾಗೂ ಅವರ ಸಂಭದಿಕರಿಗೆ ಆಹಾರದ ವ್ಯವಸ್ಥೆ ಹಾಗೂ ಹಣ್ಣು ಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಮಾತನಾಡಿ ಕರೊನಾ ತಡೆಗಟ್ಟಲು ಪ್ರತಿಯೊಬ್ಬರು ಮನೆಯಲ್ಲಿದ್ದು ಜಾಗೃತಿ ವಹಿಸುವುದು ಆದ್ಯ ಕರ್ತವ್ಯವಾಗಿದೆ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಹಾಗೂ ಸ್ಯಾನಿಟೈಜರ್ ಬಳಸುವುದರ ಜೊತೆಗೆ ಸಮಾಜಿಕ ಅಂತರ ಕಪಾಡಿಕೋಳ್ಳಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪಕ್ಷದ ತಾಲೂಕಾಧ್ಯಕ್ಷ ಜಗನ್ನಾಥ್ ರೆಡ್ಡಿ ಗೋಟುರ .ಮುಖಂಡರಾದ ಇಕ್ಬಾಲ್ ಖಾನ್, ಶಿವಪುತ್ರ ಮೊಗಾ,ವಿಜಯ್ ಕುಮಾರ್ ಕುಲಕರ್ಣಿ, ಅಬ್ದುಲ್ ಹಮೀದ್, ಎಂ.ಡಿ ಅಸ್ಲಾಂ, ಸಂತೋಷ್ ಕೆರಳ್ಳಿ, ಮುಸ್ತಫ ಕೆರಳ್ಳಿ ವೀರೇಶ್ ಗುತ್ತೇದಾರ್ , ಅಬ್ದುಲ್ ನಜೀರ , ಮೊಮ್ಮದ್ ಪಟೇಲ್ ಹೊಡೆಬಿರನಹಳ್ಳಿ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here