ಶೇಖ್ ಬೈತಮುಲ್ ಟ್ರಸ್ಟ್ ವತಿಯಿಂದ ಆಹಾರ ನೀರು ವಿತರಣೆ

0
20

ಸುರಪುರ: ನಗರದ ರಂಗಂಪೇಟೆಯ ಬೀಚ್ ಮೊಹಲ್ಲಾದ ಶೇಖ್ ಮಜೀದ್ ಬಳಿಯಲ್ಲಿ ಶೇಖ್ ಬೈತಮುಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಆಹಾರ ಮತ್ತು ನೀರು ವಿತರಣೆ ಮಾಡಲಾಯಿತು.

ಈ ಕುರಿತು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗು ಮುಸ್ಲೀಂ ಸಮುದಾಯದ ಮುಖಂಡ ಅಬ್ದುಲ್ ಗಫೂರ್ ನಗನೂರಿ ಮಾತನಾಡಿ,ನಮ್ಮ ಶೇಖ್ ಬೈತಮುಲ್ ಟ್ರಸ್ಟ್ ರಂಗಂಪೇಟೆ ವತಿಯಿಂದ ಕಳೆದ ೨೫ನೇ ತಾರೀಖಿನಿಂದ ನಗರದಲ್ಲಿನ ಬಡ ಜನತೆಗೆ ಹಾಗು ನಿರಾಶ್ರಿಕರು ವಯೋವೃಧ್ಧರು ಮತ್ತು ಗ್ರಾಮೀಣ ಪ್ರದೇಶದಿಂದ ಬಂದಂತಹ ಜನರಿಗೆ ಲಾಕ್‌ಡೌನ್ ಕಾರಣದಿಂದ ಹಸಿವಿನಿಂದ ತೊಂದರೆ ಪಡದಿರಲೆಂದು ಆಹಾರ ಮತ್ತು ನೀರು ವಿತರಣೆ ಮಾಡಲಾಗುತ್ತಿದ್ದು,ಇದನ್ನು ಜೂನ್ ೭ನೇ ತಾರೀಖಿನ ವರೆಗೂ ಮುಂದುವರೆಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಸುಮಾರು ಹತ್ತಕ್ಕೂ ಹೆಚ್ಚು ಬೈಕ್ ಮೇಲೆ ನಗರದೆಲ್ಲೆಡೆ ಸಂಚರಿಸಿದ ಟ್ರಸ್ಟ್‌ನ ಸದಸ್ಯರು ಆಹಾರ ನೀರು ವಿತರಣೆ ಮಾಡುವ ಮೂಲಕ ಜನರಿಗೆ ನೆರವಾದರು.ಶೇಖ್ ಬೈತಮುಲ್ ಟ್ರಸ್ಟ್‌ನ ಖಾಲಿದ್ ಅಹ್ಮದ್ ತಾಳಿಕೋಟೆ ಸೇರಿದಂತೆ ಅನೇಕ ಜನ ಮುಖಂಡರು ಹಾಗು ಸದಸ್ಯರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here